ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ) ಮಡಿಪು ಇವರಿಂದ ಜಿತೇಂದ್ರ ಸಜಿಪ ಇವರ ಪ್ರಾಯೋಜಕತ್ವದಲ್ಲಿ ದಕ್ಷ ಯಜ್ಞ ಯಕ್ಷಗಾನ ತಾಳಮದ್ದಳೆ ಪ್ರಶಾಂತ್ ಹೊಳ್ಳ ನೇತೃತ್ವದಲ್ಲಿ ಜರಗಿತು. ಸಜಿಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಶ್ರೀತಾಯ, ವಿದ್ಯ ಐತಾಳ್, ನಾ. ಕಾರಂತ ಪೆರಾಜೆ, , ಗುಂಡಿಡ್ಕ ಈಶ್ವರ ಭಟ್, ದೀಕ್ಷಿತ್ ಶೆಟ್ಟಿ, ರಾಜು ಪೂಜಾರಿ, ಕುಶಾಲ ಮುಡಿಪು, ವಸಂತ ರಾವ್, ನ್ಯಾಯವಾದಿ ಸದಾಶಿವ ಇತ್ತಾಳ ಮೊದಲಾದವರು ಉಪಸ್ಥಿತರಿದ್ದರು.