Monday, March 17, 2025
Homeರಾಜ್ಯಜೋಗ ಜಲಪಾತ ನೋಡಲು ಬಂದಿದ್ದ ಯುವಕ ನಾಪತ್ತೆ | ಮುಂದುವರಿದ ಶೋಧ ಕಾರ್ಯ

ಜೋಗ ಜಲಪಾತ ನೋಡಲು ಬಂದಿದ್ದ ಯುವಕ ನಾಪತ್ತೆ | ಮುಂದುವರಿದ ಶೋಧ ಕಾರ್ಯ

ಶಿವಮೊಗ್ಗ: ಜೋಗ ಜಲಪಾತ ವೀಕ್ಷಣೆಗೆಂದು ಆಗಮಿಸಿದ್ದ ಬೆಂಗಳೂರು ಯುವಕನೊಬ್ಬ ಜಲಪಾತದ ಬಳಿ ಕಣ್ಮರೆಯಾಗಿದ್ದಾನೆ. ಶೋಧ ಕಾರ್ಯ ಭರದಿಂದ ಸಾಗಿದೆ. ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಗದಗ ಮೂಲದ ಆನಂದ (24) ಜಲಪಾತದ ಬಳಿ ನಾಪತ್ತೆಯಾಗಿದ್ದಾನೆ.
ಯಾತ್ರಿ ನಿವಾಸದ ಸೀತಾಕಟ್ಟೆ ಬ್ರಿಡ್ಜ್‌ ಬಳಿಯಿಂದ ಬೇಲಿ ದಾಟಿ ಜಲಪಾತದತ್ತ ಹೋಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಯುವಕ ತಂದಿದ್ದ ಬ್ಯಾಗ್‌ ಸಿಕ್ಕಿದ್ದು, ಕಳೆದ ಆರು ದಿನಗಳಿಂದ ಯುವಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಯುವಕನ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಕಾರ್ಗಲ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜಲಪಾತದ ಬಳಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular