ವಿಸ್ಡಮ್ (WIZDOM) ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್ ವತಿಯಿಂದ ಗುರುಪೂರ್ಣಿಮಾ ದಿನದ ಶುಭ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಯನ್ನು ಗುರುತಿಸಿ ಗುರು ವಂದನಾ ಕಾರ್ಯಕ್ರಮವನ್ನು 21 ಜುಲೈ, 2024 ಭಾನುವಾರ ಬೆಳಗ್ಗೆ 10 ಗಂಟೆಗೆ ಓಷನ್ ಪರ್ಲ್, ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಪ್ರೊ.ಪಿ.ಎಲ್.ಧರ್ಮ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು, ಅಧ್ಯಕ್ಷತೆಯನ್ನು ಡಾ. ಫ್ರಾನ್ಸಿಸ್ಕಾ ತೇಜ್ ವಿಸ್ಡಮ್ ಸಂಸ್ಥೆಗಳ ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕ ವಹಿಸಲಿರುವರು. ಗೌರವ ಅತಿಥಿಗಳಾಗಿ ಸಿಎ ಗೌತಮ್ ಪೈ ಡಿ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ ಮಂಗಳೂರು ಶಾಖೆಯ ಅಧ್ಯಕ್ಷರು, ಡಾ. ದಶರಥರಾಜ್ ಕೆ ಶೆಟ್ಟಿ ಅಸೋಸಿಯೇಟ್ ಪ್ರೊಫೆಸರ್, MIT, ಮಣಿಪಾಲ M.D. ಗ್ಯಾಂಗ್ಲಿಯಾ ಟೆಕ್ನಾಲಜೀಸ್ ಪ್ರೈ.ಲಿ. ಲಿಮಿಟೆಡ್, ಸಿಎ ಗೋಪಾಲಕೃಷ್ಣ ಭಟ್ ಸಂಸ್ಥಾಪಕರು – ತ್ರಿಶಾ ಸಮೂಹ ಸಂಸ್ಥೆ ಇವರು ಉಪಸ್ಥಿತರಿರಲಿರುವರು. ನಿರೂಪಣೆ ಮತ್ತು ಸಂಘಟಕರಾಗಿ ಡಾ. ಗುರು ತೇಜ್ CAO ವಿಸ್ಡಮ್ ಸಂಸ್ಥೆಗಳ ನೆಟ್ವರ್ಕ್, ಅಭಿಲಾಷ್ ಕ್ಷತ್ರಿಯ ಸಿಇಒ ವಿಸ್ಡಮ್ ಸಂಸ್ಥೆಗಳ ನೆಟ್ವರ್ಕ್ ನಡೆಸಿಕೊಡಲಿದ್ದಾರೆ.
ವಿಸ್ಡಮ್ ಸಂಸ್ಥೆಗಳ ನೆಟ್ವರ್ಕ್ ಮಂಗಳೂರು, ಉಡುಪಿ, ಮಣಿಪಾಲ, ಹಾಸನ, ಶಿವಮೊಗ್ಗ, ಪುತ್ತೂರು ಮೂಡುಬಿದಿರೆ, ಬೆಂಗಳೂರು, ಜೈಪುರ, ದುಬೈನಲ್ಲಿ ಶಾಖೆಗಳನ್ನು ಹೊಂದಿದೆ.