Sunday, February 16, 2025
Homeನಿಧನಧಾರ್ಮಿಕ ಮುಖಂಡ ಹಾಗೂಕೆನರಾ ಬ್ಯಾಂಕಿನ  ಉನ್ನತ ನಿವೃತ್ತಅಧಿಕಾರಿ ಕೆ ತುಳಸೀ ದಾಸ್  ರಾಮಕೃಷ್ಣಕಿಣಿ ನಿಧನ

ಧಾರ್ಮಿಕ ಮುಖಂಡ ಹಾಗೂಕೆನರಾ ಬ್ಯಾಂಕಿನ  ಉನ್ನತ ನಿವೃತ್ತಅಧಿಕಾರಿ ಕೆ ತುಳಸೀ ದಾಸ್  ರಾಮಕೃಷ್ಣಕಿಣಿ ನಿಧನ

ಮಣಿಪಾಲ  ನಿವಾಸಿ  ಧಾರ್ಮಿಕ ಮುಖಂಡ ಹಾಗೂ   ಕೆನರಾ ಬ್ಯಾಂಕಿನ  ಉನ್ನತ ನಿವೃತ್ತ  ಅಧಿಕಾರಿ ಕೆ ತುಳಸೀ ದಾಸ್  ರಾಮಕೃಷ್ಣ  ಕಿಣಿ..( 89 ವರ್ಷ ) ತಮ್ಮ ಸ್ವ ಗ್ರಹ ದ ಮಣಿಪಾಲ್  ಇಂದು(ಜ. 17) ಮುಂಜಾನೆ  ನಿಧನರಾದರು , ಮೃತರು  ಪತ್ನಿ ,  ಓರ್ವ ಪುತ್ರ  , ನಾಲ್ವರು ಪುತ್ರಿಯರನ್ನುಅಗಲಿದ್ದಾರೆ.                            ಶ್ರೀ ವೆಂಕಟರಮಣ ದೇವಸ್ಥಾನ  ಕಲ್ಯಾಣಪುರ ಭಜನಾ ಸಪ್ತಾಹದ ಸಮಿತಿಯ ಅಧ್ಯಕ್ಷರಾಗಿ ಬಹಳಷ್ಟು ವರ್ಷಗಳ ಕಾಲ ನಿರಂತರ  ಸೇವೆ ನೀಡುತ್ತಾ ಬಂದಿರುತ್ತಾರೆ   , ದೇವಳದ ಯಾತ್ರಿ  ನಿವಾಸ  ಇವರ ಮುಂದಾಳತ್ವದಲ್ಲಿ ನಿರ್ಮಾಣ ಗೊಂಡಿದೆ ,  ದೇವಳದ ಅಭಿವೃದ್ಧಿಗಳಲ್ಲಿ ಗಣನೀಯ ಸೇವೆ  , ಜಿ ಎಸ್ ಬಿ  ಸಮಾಜದ ಕಾಶೀಮಠ , ಗೋಕರ್ಣಮಠ  , ಕೈವಲ್ಯ ಮಠದ ಸ್ವಾಮೀಜಿಯವರ ಪ್ರೀತಿ  ಪಾತ್ರರಾಗಿದ್ದರು    ಸಮಾಜ ಸೇವಕರಾಗಿ , ಕೊಡುಗೆ ದಾನಿಯಾಗಿದ್ದರು , ನೀಲಾವರ ಗೋಶಾಲೆ  , ಅಯೋಧ್ಯ ರಾಮಮಂದಿರ , ಪರಿಸರದ ಇತರೆ ದೇವಸ್ಥಾನಗಳ  ಜೀರ್ಣೋದ್ಧಾರಕ್ಕೆ ಧನ ಸಹಾಯ  , ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರ್ಥಿಕ  ನೆರವು  , ಅನ್ಯಾರೋಗ್ಯ ಪೀಡಿತರಿಗೆ ಧನ ಸಹಾಯ  , ಸಂಗೀತ ಅಭಿಮಾನಿಗಳಾದ  ಇವರು ಪ್ರಸಿದ್ಧ ಕಲಾವಿದರನ್ನೂ   ಕಲ್ಯಾಣಪುರ ಕರೆ ತಂದು ಕಾರ್ಯಕ್ರಮ ನೀಡುವಲ್ಲಿ ಸಹಕಾರಿಯಾಗಿದ್ದರು.   

ಇವರ ನಿಧನ ಕ್ಕೆ  ಮಾಜಿ ಸಚಿವ ಪ್ರಮೋದ್ ಮದ್ವರಾಜ್  , ಮಾಜಿ ಶಾಸಕ ರಘುಪತಿ ಭಟ್  , ಹರ್ಷ ಬಳಗ  ಹಾಗೂ ವಿವಿಧ ಭಜನಾ ಮಂಡಳಿಯವರು  ಸಂತಾಪ ಸೂಚಿಸಿದ್ದಾರೆ  

RELATED ARTICLES
- Advertisment -
Google search engine

Most Popular