Friday, May 23, 2025
Homeತುಳು ಭಾಷೆನಮ ತುಳುವೆರ್ ಸಂಘಟನೆಯ ಕಲಾಸೇವೆ ವಿಶೇಷವಾದುದು: ಹರೀಶ್ ಪೂಜಾರಿ

ನಮ ತುಳುವೆರ್ ಸಂಘಟನೆಯ ಕಲಾಸೇವೆ ವಿಶೇಷವಾದುದು: ಹರೀಶ್ ಪೂಜಾರಿ

ಹೆಬ್ರಿ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಕಲಾ ಸೇವೆ ಅದ್ಭುತ. ಗ್ರಾಮೀಣ ಪ್ರದೇಶದಲ್ಲಿ ಅವರು ಕಲಾ ಲೋಕವನ್ನೇ ಸೃಷ್ಟಿಸಿದ್ದಾರೆ. ಹಳ್ಳಿಯಲ್ಲಿದ್ದುಕೊಂಡು ಜಗತ್ತಿನಾದ್ಯಂತ ಕಲಾ ಸೇವೆ ಪಸರಿಸಿದ ಪರಿ ವಿಶೇಷವಾದುದು ಎಂದು ಹೆಬ್ರಿ ಹರೀಶ್ ಪೂಜಾರಿ ಹೇಳಿದರು. ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಮುದ್ರಾಡಿ ನಾಟ್ಕದೂರು ಬಿ.ವಿ. ಕಾರಂತ ಬಯಲು ರಂಗಭೂಮಿಯಲ್ಲಿ ನಡೆದ `ಅಂಬೆ’ ನಾಟಕ ಪ್ರದರ್ಶನದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಅಂಬೆ ನಾಟಕ ಅದ್ಭುತವಾಗಿದೆ. ಕಲಾವಿದರ ಶ್ರೇಯಸ್ಸೇ ನಾಟಕದ ಯಶಸ್ಸಿಗೆ ಕಾರಣ. ಈ ನಾಟಕ ಶತದಿನ ಪ್ರದರ್ಶನ ಕಾಣಲಿ ಎಂದು ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ವಿಠಲ ಶೆಟ್ಟಿ ಹಾರೈಸಿದರು. ಉದ್ಯಮಿ ಯೋಗೀಶ್ ಭಟ್, ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಮಾತನಾಡಿದರು. ಕಲಾವಿದರನ್ನು, ರಂಗ ನಿರ್ದೇಶಕ ಮೈಸೂರಿನ ವಿಕಾಸ್ ದಂಪತಿಯನ್ನು ಗೌರವಿಸಲಾಯಿತು. ಸುಕುಮಾರ್ ಮೋಹನ್ ಸ್ವಾಗತಿಸಿದರು, ವಿಕಾಸ್ ಮೈಸೂರು ನಿರೂಪಿಸಿದರು.

RELATED ARTICLES
- Advertisment -
Google search engine

Most Popular