ತೀರ್ಥಹಳ್ಳಿ: ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಲ್ಲೂ ಭಯ ಇದ್ದೇ ಇರುತ್ತದೆ. ಹೀಗಾಗಿ ಸಣ್ಣ ಹಾವು ಕಂಡರೂ ಬೆಚ್ಚಿ ಬೀಳುವ ಜನ ಕೈಕಾಲು ಬಿಡುವುದಿದೆ. ಆದರೆ ಇಲ್ಲೊಂದು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಬಗ್ಗೆ ಆಗುಂಬೆ ರೈನ್ಫಾರೆಸ್ಟ್ ರಿಸರ್ಚ್ ಸ್ಟೇಶನ್ (ಎಆರ್ಆರ್ಎಸ್) ನಿರ್ದೇಶಕ ಅಜಯ್ ಗಿರಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಎಂತವರನ್ನೂ ಬೆಚ್ಚಿ ಬೀಳಿಸುವಂತಿದೆ.
ಆಗುಂಬೆ ಬಳಿಯ ಗ್ರಾಮವೊಂದರ ಮನೆಯೊಂದರ ಬಳಿ ಪೊದೆಯಲ್ಲಿ ಬೃಹತ್ ಕಾಳಿಂಗವೊಂದು ಇರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಎಆರ್ಆರ್ಎಸ್ನವರಿಗೆ ಮಾಹಿತಿ ನೀಡಿದ್ದಾರೆ.
ತನ್ನ ತಂಡದೊಂದಿಗೆ ಗಿರಿ ಸ್ಥಳಕ್ಕೆ ಆಗಮಿಸಿದರು. ಹಾವು ರಕ್ಷಿಸುವ ವೇಳೆ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಬಳಿಕ ಹಾವನ್ನು ಕ್ಷಣ ಮಾತ್ರದಲ್ಲಿ ಹಿಡಿದು ಬ್ಯಾಗ್ ಒಂದಕ್ಕೆ ಹಾಕಿ ಸುರಕ್ಷಿತ ತಾಣಕ್ಕೆ ಬಿಟ್ಟು ಬಂದರು.
ಕಾಳಿಂಗ ಹಾವಿನ ರಕ್ಷಣೆಯ ಕಾರ್ಯಾಚರಣೆ ಕುರಿತ ವಿಡಿಯೊ ಗಿರಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ವೀಡಿಯೊ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ…