ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ನಡೆಸಲಾಗುವ ವಿವಿಧ ಯೌಗಿಕ ಚಟುವಟಿಕೆಗಳಿಗೆ ಮೊರಾರ್ಜಿ ದೇಸಾಯಿ ವಸತಿಶಾಲೆ ಹೇರಂಜಾಲು ಇಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್),ಸರಕಾರಿ ಆಯುರ್ವೇದ ಚಿಕಿತ್ಸಾಲಯ, ಕಾಲ್ತೋಡು,ಜೇಸಿಐ ಉಪ್ಪುಂದ ಇವರ ವತಿಯಿಂದ ದಿನಾಂಕ: 10-06-2024 ರಿಂದ 20-06-2024 ರವರೆಗೆ ಆಯೋಜಿಸಿ ಇಂದು ಯೋಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉಪ್ಪುಂದ ಜೇಸಿಐ ಅಧ್ಯಕ್ಷ ಜೇಎಫ್ಎಮ್ ಮಂಜುನಾಥ ದೇವಾಡಿಗರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯೋಗ ದಿನಾಚರಣೆಯು ಕೇವಲ ಆ ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾದಾಗ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಎಂದು ಹೇಳಿದರು
ಕಾರ್ಯ ಕ್ರಮ ಆಯೋಜಕರಾದ ಕಾಲ್ತೋಡು ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ.ವೀಣಾ ಕಾರಂತ್ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ ಹಾಗೂ ಈ ಸಲದ ಘೋಷ ವಾಕ್ಯ. ” ಮಹಿಳಾ ಸಬಲೀಕರಣಕ್ಕಾಗಿ ಯೋಗ” ಮಹಿಳೆಯರಿಗೆ ಯೋಗದಿಂದಾಗುವ ಆರೋಗ್ಯ ಪ್ರಯೋಜನ ಗಳನ್ನು ತಿಳಿಸಿದರು ಅಲ್ಲದೆ ಯೋಗದ ಕಾಮನ್ ಪ್ರೋಟೋಕಾಲ್ ಗಳ ಕರಪತ್ರವನ್ನು ನೀಡಿದರು ಜೊತೆಯಲ್ಲಿ ಈ ಕಾರ್ಯಕ್ರಮ ಇಲ್ಲಿ ಮಾತ್ರವಲ್ಲದೆ, ಡಿ.ದೇವರಾಜ್ ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಬೈಂದೂರು ,ಸ.ಹಿ.ಪ್ರಾ.ಶಾಲೆ ಕಾಲ್ತೋಡು ಹಾಗೂ ಸದ್ರಿ ಚಿಕಿತ್ಸಾಲಯದಲ್ಲಿ ಯೋಗ ಶಿಕ್ಷಕರಾದ ಶೇಖರ ಶೆಟ್ಟಿ, ಸರಸ್ವತಿ ಯವರಿಂದ ಯೋಗ ತರಬೇತಿ, ವೈದ್ಯಾದಿಕಾರಿಗಳಿಂದ ಆಯುಷ್ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯ ಶಿಕ್ಷಕಿ ಕಮಲಾರವರು, ಯೋಗ ಜೀವನದಿಂದ ಸಾರ್ಥಕ ಬದುಕನ್ನು ಪಡೆಯಬಹುದೆಂದು ತಿಳಿಸಿದರು.
ಕಾಲ್ತೋಡು ಯೋಗ ಶಿಕ್ಷಕರಾದ ಶ್ರೀ ಯುತ ಶೇಖರ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನ ಪ್ರಾಣಾಯಾಮಗಳ ಅಭ್ಯಾಸ ನಡೆಸಿಕೊಟ್ಟ ರು.
ಈ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶಂಕರ್,ಯೋಗ ಶಿಕ್ಷಕರಾದ ಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಅನುಪಮಾ ವಂದಿಸಿದರು.