ಕಣಿಯೂರು: ಕಣಿಯೂರು ಗ್ರಾಮದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 40 ವರ್ಷಗಳಿಂದ ನೌಕರರಾಗಿ ,ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ರಘುಪತಿ. ಕೆ ಅನಾಬೆ ಇವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಇಂದು(ಏ.30) ಸಂಜೆ 7.30 ಗಂಟೆಗೆ ಸರಿಯಾಗಿ ಪದ್ಮುಂಜ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಲಿದೆ, ಸಂಜೆ ಗಂಟೆ 6.30 ಕ್ಕೆ ಸರಿಯಾಗಿ ರಘುಪತಿ ಕೆ ಅನಾಬೆ ಇವರ ಸೇವಾರ್ಥವಾಗಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ ಇವರಿಂದ ಶುಕ್ರನಂದನೆ ಯಕ್ಷಗಾನ ರಾತ್ರಿ 8.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.