Monday, May 19, 2025
Homeಹೆಬ್ರಿಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ನಮ್ಮ ದೇಶದ ಹೆಮ್ಮೆಯ , ಸಂಭ್ರಮದ ಆಚರಣೆ, ವೀರ ಯೋಧರಿಗೆ , ಹುತಾತ್ಮರಾದ ವೀರ ಕಲಿಗಳಿಗೆ ನಮನ ಸಲ್ಲಿಸುವ ಶುಭದಿನ . ಕಾರ್ಗಿಲ್ ಅನ್ನು ಧೈರ್ಯ, ಸಾಹಸ , ಶೌರ್ಯದಿಂದ ವಶಪಡಿಸಿಕೊಂಡರು. ನಮ್ಮ ದೇಶದ ಸೈನಿಕರು ಕ್ಲಿಷ್ಟಕರವಾದ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಸೈನಿಕರನ್ನು ಸದೆ ಬಡಿದರು.

ಭಾರತಮಾತೆಯ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟರು. ಅಂತಹ ಯೋಧರಿಗೆ ನುಡಿ ನಮನವನ್ನು ದೇಶ ವ್ಯಾಪ್ತಿಯಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀ ವತ್ಸ ಗಾಂವಕರ್ ನುಡಿದರು. ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಗಿಲ್ ದಿವಸ್ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕರು ಶ್ರೀವತ್ಸ ಗಾಂವಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷರು ಆಡಳಿತ ಮಂಡಳಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ಶ್ರೀ ಶೈಲೇಶ್ ಕಿಣಿ , ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಅಪರ್ಣಾ ಆಚಾರ್ , ಶ್ರೀಮತಿ ಶಕುಂತಲಾ ಉಪಸ್ಥಿತರಿದ್ದರು. ಕುಮಾರಿ ಸಮೃದ್ಧಿ ನಿರೂಪಿಸಿ , ಕುಮಾರಿ ಆಶಿಕಾ ಶೆಟ್ಟಿ ಸ್ವಾಗತಿಸಿ , ಕುಮಾರಿ ಧೃತಿ ವಂದಿಸಿದರು.

RELATED ARTICLES
- Advertisment -
Google search engine

Most Popular