ಕಾರ್ಕಳ: ತಾಲೂಕಿನ ಪಳ್ಳಿ ಗ್ರಾಮದ ನಿವಾಸಿ, ಪಳ್ಳಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದುರ್ಗಾಪ್ರಸಾದ್ ಭಾರತೀಯ ಸೇನೆಯಲ್ಲಿ ಅಗ್ನಿಪಥ್ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ. ಪಳ್ಳಿ ಬೊಬ್ಬರಪಲ್ಕೆ ನಿವಾಸಿ ಜಯರಾಂ ಮತ್ತು ಶೋಭಾ ದಂಪತಿ ಪುತ್ರ ದುರ್ಗಾಪ್ರಸಾದ್ ಬೆಂಗಳೂರಿನ ಎಂಇಜಿ ಸೆಂಟರ್ನಲ್ಲಿ ತರಬೇತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದ ಲಡಾಕ್ನಲ್ಲಿ ಕರ್ತವ್ಯ ನಿಭಾಯಿಸಲು ಜೂ.19ರಂದು ದುರ್ಗಾಪ್ರಸಾದ್ರವರು ತೆರಳಲಿದ್ದಾರೆ.