ಮೂಡುಬಿದಿರೆ: ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಜಾನಪದ, ಸಮಾಜಸೇವೆ ಹೀಗೆ ಎಲ್ಲ ಆಯಾಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ರಾಜ್ಯದ 77ನೇ ರಾಜ್ಯೋತ್ಸವದ ಸುಸಂದರ್ಭದಲ್ಲಿ ಡಿಸೆಂಬರ್ 12, 2024 ರಂದು ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪ, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಕುಟಮಣಿ ರಾಜ್ಯಪ್ರಶಸ್ತಿಗೆ ಸುಧಾಕರ ಹೆಗ್ಡೆ ಮೂಡುಬಿದಿರೆ ಇವರು ಭಾಜನರಾದರು. ಇವರು ಮುಂದಿನ ದಿನಮಾನಗಳಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹೆತ್ತ ತಂದೆ ತಾಯಿ, ಪೋಷಕರಿಗೆ ಅಕ್ಷರಾಭ್ಯಾಸ ನೀಡಿದ ಗುರುಗಳಿಗೆ ಹುಟ್ಟಿದ ಊರಿಗೆ, ಕೀರ್ತಿ ತರಲಿ ಎಂದು ಕಲಾಕುಂಚ ತಂಡವು ಅಭಿನಂದಿಸಿದೆ.
ಸುಧಾಕರ ಹೆಗ್ಡೆ ಮೂಡುಬಿದಿರೆ ಅವರಿಗೆ ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿ
RELATED ARTICLES