Saturday, May 24, 2025
HomeUncategorizedಕಾಸರಗೋಡು:ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು:ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ 2024 ಆಗಸ್ಟ್ 21 ರಂದು ಜರಗಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ 353ನೇ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ತಂತ್ರಿವರ್ಯರು ಹಾಗೂ ಮುಕ್ತೇಸರರಾದಂತಹ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರುರವರಿಗೆ ಪ್ರಥಮ ಪ್ರತಿಯನ್ನು ನೀಡಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಪ್ರಮುಖರಾದ ಶ್ರೀ ಕೆ.ಎನ್. ವೆಂಕಟ್ರಮಣ ಹೊಳ್ಳ, ಶ್ರೀ ಕೆ.ಎನ್. ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ಶ್ರೀ ರಾಮ್ ಪ್ರಸಾದ್, ನಗರ ಸಭಾ ಸದಸ್ಯೆ ಶ್ರೀಲತಾ ಟೀಚರ್, ಪ್ರದೀಪ್ ಬೇಕಲ್, ಗುರುಪ್ರಸಾದ್ ಕೋಟೆಕಣಿ, ಕಿಶೋರ್ ಕುಮಾರ್, ಮೀರಾ ಕಾಮತ್, ಕೃಷ್ಣ ಮನ್ನಿಪ್ಪಾಡಿ, ಶ್ರೀಕಾಂತ್ ಕಾಸರಗೋಡು, ಅರುಣ ಕುಮಾರಿ, ಸವಿತಾ, ಪ್ರೇಮಾ ಶೆಟ್ಟಿ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular