ಕಾಸರಗೋಡು: ವಿಸ್ಡಮ್ ಎಜುಕೇಷನಲ್ ಇನ್ಸಿಟ್ಯೂಷನಲ್ ನೆಟ್ವರ್ಕ್ ಮಂಗಳೂರು ನೀಡುವ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ಗೆ ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಆಯ್ಕೆಯಾಗಿದ್ದಾರೆ.
21.7.2024 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಅವಾರ್ಡ್ ನೀಡಲಾಗುವುದು.
ಪರಿಚಯ
ಪುಸ್ತಕ ಪರಿವ್ರಾಜಕ ಎಂದೇ ಗುರುತಿಸಲ್ಪಡುವ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ಸಮಾಜದಲ್ಲಿ ಶೈಕ್ಷಣಿಕ, ಸಾಹಿತ್ತಿಕ, ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಸಂಚಲನ ಮೂಡಿಸಲು 2001 ರಲ್ಲಿ ಸ್ಥಾಪಿಸಿದ ಕನ್ನಡಪರ ಸಂಸ್ಥೆಯೇ “ಕನ್ನಡ ಭವನ ಮತ್ತು ಗ್ರಂಥಾಲಯ” ನೂರಾರು ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು “ಭರವಸೆಯ ಬೆಳಕು” ರಾಜ್ಯಾಂತರ ಪ್ರಶಸ್ತಿ, ಪ್ರತಿಭಾವಂತರಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ” ಹಿರಿಯ ಸಮಾಜ ಸಾಧಕರಿಗೆ ಕನ್ನಡ ಭವನ ಸಮಾಜ ಸೇವಾರತ್ನ ಪ್ರಶಸ್ತಿ ಹಿರಿಯ ಸಾಹಿತಿಗಳಾದ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಪಂಜೆ ಮಂಗೇಶರಾಯ, ಡಾ| ಕಯ್ಯಾರ ಕಿಞ್ಞಣ್ಣ ರೈ ಇವರ ನಾಮಧೇಯದಲ್ಲಿ “ರಾಷ್ಟ್ರೀಯ ಪ್ರಶಸ್ತಿ ನೀಡಿ ರಾಜ್ಯಾಂತರ ಕೀರ್ತಿಪಡೆದಿರುತ್ತಾರೆ. ಇದೀಗ ಗ್ರಂಥಾಲಯ, 20000 ಪುಸ್ತಕಗಳಿರುವ ಸುಸಜ್ಜಿತ ಸಾರ್ವಜನಿಕ ವಾಚನಾಲಯದೊಂದಿಗೆ, ಸೊಗಸಾದ ಕಾರ್ಯಕ್ರಮ ಸಂಯೋಜನೆಗೆ ಆಕರ್ಷಕ ಬಯಲು ರಂಗಮಂಟಪ ವ್ಯವಸ್ಥೆ ಯಾವುದೇ ವಂತಿಗೆ, ದೇಣಿಗೆ ಪಡೆಯದೆ ಸ್ವಂತ ನೆಲೆಯಿಂದ ಕಾರ್ಯಗತಗೊಳಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಗ್ರಂಥಾಲಯ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ ಸನ್ಮಾನಗಳು ಸಂದಿದೆ. ಇದೀಗ ಸಂಧ್ಯಾರಾಣಿ ಟೀಚರ್ ಆರ್ಥಿಕ ಅಶಕ್ತ ಲೇಖಕರನ್ನು ಪುಸ್ತಕ ಪ್ರಪಂಚಕ್ಕೆ ತರಲು “ಕನ್ನಡ ಭವನ ಪ್ರಕಾಶನ’ದ ಮೂಲಕ ತೊಡಗಿಕೊಂಡಿದ್ದಾರೆ.