Saturday, May 24, 2025
Homeಧಾರ್ಮಿಕಕವತ್ತಾರು: ಏ.22ರಿಂದ 26ರ ವರೆಗೆ ಸಿರಿ ಆಯನೋತ್ಸವ

ಕವತ್ತಾರು: ಏ.22ರಿಂದ 26ರ ವರೆಗೆ ಸಿರಿ ಆಯನೋತ್ಸವ

ಮಂಗಳೂರು: ಮೂಲ್ಕಿ ಸಮೀಪದ ಸಿರಿ ಅಲಡೆ ಕ್ಷೇತ್ರ ಕವತ್ತಾರು ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವರ ಆಯನೋತ್ಸವ ಏ.22ರಿಂದ 26ರ ತನಕ ನಡೆಯಲಿದೆ.

22ರಂದು ಮಧ್ಯಾಹ್ನ ಧ್ವಜಾರೋಹಣ, ಅನ್ನಸಂತರ್ಪಣೆ, ಸಾಯಂಕಾಲ 6.30ಕ್ಕೆ ಉತ್ಸವ ಬಲಿ, 23ರಂದು ಬೆಳಗ್ಗೆ ಗಣಪತಿಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಅಜಿಲರ ಮನೆಯಿಂದ ದೇವಸ್ಥಾನಕ್ಕೆ ಭಂಡಾರ ಆಲಡೆಗೆ ಆಗಮಿಸಿ ಮಹಾಪೂಜೆ, ಸಿರಿ ಜಾತ್ರಾ ಮಹೋತ್ಸವ(ಕಬತ್ತಾರಾಯನ), 24ರಂದು ಬೆಳಗ್ಗೆ 9.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಾಯಂಕಾಲ ಅಂಬೋಡಿ(ಚೆಂಡು), 6.30ಕ್ಕೆ ಉತ್ಸವ ಬಲಿ, 25ರಂದು ಸಾಮೂಹಿಕ ಕಾರ್ತಿಕಪೂಜೆ, ಮಧ್ಯಾಹ್ನ ವರಸರಿ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6.30ಕ್ಕೆ ಉತ್ಸವ ಬಲಿ, ಶ್ರೀ ಭೂತ ಬಲಿ, ಶಯನ ಕವಾಟಬಂಧನ, 26ರಂದು ಬೆಳಗ್ಗೆ 8ಕ್ಕೆ ಕವಾಟೋದ್ಘಾಟನೆ, ಪ್ರಸಾದ ವಿತರಣೆ, ಸಾಯಂಕಾಲ 6.30ಕ್ಕೆ ಸಾಮೂಹಿಕ ಹೂವಿನ ಪೂಜೆ, ರಾತ್ರಿ ಬಲಿ ಹೊರಟು ಓಕುಳಿ, ಕಟ್ಟೆ ಪೂಜೆ, ಅವನೃತ, ಧ್ವಜಾವರೋಹಣ ನೆರವೇರಲಿದೆ.

RELATED ARTICLES
- Advertisment -
Google search engine

Most Popular