Saturday, June 14, 2025
Homeರಾಷ್ಟ್ರೀಯನಾಳೆಯಿಂದ ಕೇದಾರನಾಥ, ಗಂಗೋತ್ರಿ, ಯಮುನೇತ್ರಿ ದೇಗುಲ ಓಪನ್

ನಾಳೆಯಿಂದ ಕೇದಾರನಾಥ, ಗಂಗೋತ್ರಿ, ಯಮುನೇತ್ರಿ ದೇಗುಲ ಓಪನ್

ಡೆಹ್ರಾಡೂನ್: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ ಭಕ್ತರಿಗಾಗಿ ತೆರೆಯಲಿವೆ.

ಹಿಮಪಾತದಿಂದಾಗಿ ಹಿಮಾಲಯದಲ್ಲಿ ನೆಲೆ ನಿಂತಿರುವ ಈ ದೇಗುಲಗಳನ್ನು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬೇಸಿಗೆಯ ಆರಂಭದಲ್ಲಿ ಮತ್ತೆ ತೆರೆಯಲಾಗುತ್ತದೆ.

ಚಾರ್ ಧಾಮದ ಮತ್ತೊಂದು ದೇಗುಲ ಬದರಿನಾಥ ಮೇ 12ರಂದು ತೆರೆಯಲಾಗುತ್ತದೆ. ಕೇದಾರನಾಥ ದೇಗುಲವನ್ನು ಇಪ್ಪತ್ತು ಕ್ವಿಂಟಲ್ ಹೂಗಳಿಂದ ಸಿಂಗರಿಸಲಾಗುತ್ತದೆ ಎಂದು ಬದರಿನಾಥ-ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ತಿಳಿಸಿದ್ದಾರೆ.    

RELATED ARTICLES
- Advertisment -
Google search engine

Most Popular