ಕಾಸರಗೋಡು :ಎಸ್ ಎಲ್ ಭೈರಪ್ಪ ಅವರ “ಯಾನ “ಕಾದಂಬರಿಯನ್ನು ಕನ್ನಡ ದಿಂದ ಮಲಯಾಳದಲ್ಲಿ ಅನುವಾದ ಮಾಡಿದ ಯಾನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಶಾಂತರ ಪ್ರಶಸ್ತಿಗೆ ಬಾಜನರಾದ ಕಾಸರಗೋಡಿನ ಕೆ ವಿ ಕುಮಾರನ್ ಅವರಿಗೆ ಕಾಸರಗೋಡು ಕನ್ನಡ ಭವನದ ವತಿಯಿಂದ ಗೌರವ ಅಭಿನಂದನೆ ನೀಡಿ ಗೌರವಿಸಿತು.
ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ದಲ್ಲಿ ದ್ರಾವಿಡ ಭಾಷಾ ಅನುವಾದಕರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಡೆದ ಮಲಯಾಳಂ -ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್ ನೇತೃತ್ವ ವಹಿಸಿದರು. ಗೌರವ ಅಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅಭಿನಂದನಾ ಪತ್ರ ನೀಡಿ, ನಿಕಟಪೂರ್ವ ಅಧ್ಯಕ್ಷರಾದ ಸಾಹಿತಿ ರಾಧಾಕೃಷ್ಣ ಕೆ ಉಳಿಯತಡ್ಕ ಶಾಲು ಹೊದಿಸಿ, ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿ ಗೌರವಿಸಿದರು.
ಮಲಯಾಳಂ ಸಾಹಿತಿ ರವೀಂದ್ರನ್ ಪಾಡಿ ಅಭಿನಂದನಾ ಭಾಷಣ ಮಾಡಿದರು. ಡಿ ಬಿ ಟಿ ಎ ಅಧ್ಯಕ್ಷೆ ಡಾ ಸುಷ್ಮಾ ಶಂಕರ್ ಬೆಂಗಳೂರು, ಕನ್ನೂರು ವಿ ವಿ ಸೆನೆಟ್ ಸದಸ್ಯ ಡಾ., ಪ್ರೋ. ರತ್ನಾಕರ ಮಲ್ಲಮೂಲೆ, ಕುಪ್ಪಮ್ ಯೂನಿವರ್ಸಿಟಿ ಪ್ರೋ. ಹಿರಣ್ಯ ಶಿವಕುಮಾರ್, ಡಿ ಬಿ ಟಿ ಎ ಪ್ರದಾನ ಕಾರ್ಯದರ್ಶಿ ಡಾ. ರೋಷನ್, ಕನ್ನಡ ಭವನ ಪ್ರಕಾಶನ, ಪ್ರಕಾಶಕಿ ಸಂದ್ಯಾ ರಾಣಿ ಮುಂತಾದವರಿದ್ದರು. ಕೆ ವಿ ಕುಮಾರನ್ ಇವರಿಗೆ 2024ರಲ್ಲಿ ಸಮಗ್ರ ಸಾಹಿತ್ಯ ವಿಭಾಗದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಡಾ. ಕೋಟ ಶಿವರಾಮ್ ಕಾರಂತ್ ರ “ಚೋಮನ ದುಡಿ “ಮಲಯಾಳಕ್ಕೆ ಅನುವಾದ ಮಾಡಿದ ಮಲಯಾಳಂ ಕೃತಿ ಮೂರು ಲಕ್ಷಕ್ಕೂ ಅಧಿಕ ಕೃತಿಗಳು ಚಲಾವಣೆಯಾಗಿತ್ತು. ಇವರೀಗೆ ಸೇರಿದ ಸಮಸ್ತರೂ ಗೌರವದಿಂದ ಅಭಿನಂದಿಸಿದರು.