Monday, May 12, 2025
Homeರಾಷ್ಟ್ರೀಯದಸರಾ ಪರಂಪರೆಗಾಗಿ ಕುದುರೆ ಸವಾರಿ ಕಲಿಯುತ್ತಿದ್ದ ರಾಜವಂಶಸ್ಥ ಬಿದ್ದು ಸಾವು | ಸವಾರಿ ವೇಳೆ ಬೀಳುವ...

ದಸರಾ ಪರಂಪರೆಗಾಗಿ ಕುದುರೆ ಸವಾರಿ ಕಲಿಯುತ್ತಿದ್ದ ರಾಜವಂಶಸ್ಥ ಬಿದ್ದು ಸಾವು | ಸವಾರಿ ವೇಳೆ ಬೀಳುವ ವಿಡಿಯೋ ವೈರಲ್

ಕರ್ನೂಲ್‌: ರಾಜರ ಕಾಲದಲ್ಲಿ ಕುದುರೆ ಸವಾರಿ ಒಂದು ಸಹಜವಾದ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು. ಈಗಂತೂ ಕುದುರೆ ಸವಾರಿ ಮಾಡುವುದು, ಕಲಿಯುವುದು ಬಹಳ ಅಪರೂಪ. ಆದರೆ ರಾಜವಂಶಸ್ಥರೊಬ್ಬರು ತಮ್ಮ ಗತವೈಭವ ಮೆರೆಯಲು ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಕರ್ನೂಲ್ ಜಿಲ್ಲೆಯ ಯಾದವರಾಜ ವಂಶದಲ್ಲಿ ರಾಜವಂಶಸ್ಥರು ದಸರಾದ ವೇಳೆ ಕುದುರೆ ಸವಾರಿ ಮಾಡುವುದು ಸಂಪ್ರದಾಯ. ತಲತಲಾಂತರದ ಸಂಪ್ರದಾಯ ಮುಂದುವರಿಸುವ ಸಲುವಾಗಿ ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥ ಪೃಥ್ವಿರಾಜ್‌ ರಾಯುಡು ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ. ಕುದುರೆ ಸವಾರಿ ಮಾಡುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪೃಥ್ವಿರಾಜ್ ರಾಯುಡು ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಪೃಥ್ವಿರಾಜ್ ರಾಯುಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕುದುರೆ ಸವಾರಿ ವೇಳೆ ಪೃಥ್ವಿರಾಜ್ ರಾಯುಡು ಆಕಸ್ಮಿಕವಾಗಿ ಕೆಳಗೆ ಬಿದ್ದಿರುವ ವಿಡಿಯೋ ಸೆರೆ ಹಿಡಿಯಲಾಗಿದೆ. ಕೆಳಗೆ ಬಿದ್ದ ಪೃಥ್ವಿರಾಜ್ ಬದುಕುತ್ತಾನೆ ಎಂದು ನಿರೀಕ್ಷೆಯಲ್ಲಿದ್ದ ರಾಜವಂಶಸ್ಥರು ಆಘಾತಕ್ಕೀಡಾಗಿದ್ದಾರೆ.

ವಿಡಿಯೊ ನೋಡಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/sudhakarudumula/status/1817783042313986534?ref_src=twsrc%5Etfw%7Ctwcamp%5Etweetembed%7Ctwterm%5E1817783042313986534%7Ctwgr%5E32733f0fede6cf382db1f32e19540778e1e86194%7Ctwcon%5Es1_&ref_url=https%3A%2F%2Fnewsfirstlive.com%2Fa-yadava-king-of-andhra-died-while-practicing-horse-riding%2F

RELATED ARTICLES
- Advertisment -
Google search engine

Most Popular