Tuesday, May 13, 2025
Homeಅಪರಾಧಕುಂದಾಪುರ : ಸೋಡಾ ಬಾಟಲಿಯಲ್ಲಿ ಯುವಕನಿಗೆ ಹಲ್ಲೆ

ಕುಂದಾಪುರ : ಸೋಡಾ ಬಾಟಲಿಯಲ್ಲಿ ಯುವಕನಿಗೆ ಹಲ್ಲೆ

ಕುಂದಾಪುರ : ನಾಟಕ ನೋಡಿಕೊಂಡು ಬೈಕಿನಲ್ಲಿ ಬರುತಿದ್ದ ಯುವಕನಿಗೆ ಪರಿಚಿತ ತಂಡದಿಂದ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕೋಟೇಶ್ವರದಲ್ಲಿ ನೆಡದಿದೆ. ಕೋಟೇಶ್ವರ ಗ್ರಾಮದ ಕುಂಬ್ರಿ ಸಮೀಪದ ಹಳೆ ಅಳಿವೆ ನಿವಾಸಿ ಸಂದೀಪ್ (28) ಹಲ್ಲೆಗೊಳಗಾದ ವ್ಯಕ್ತಿ.

ಸಂದೀಪ್ ಸ್ನೇಹಿತರಾದ ಜೀವನ್ ಹಾಗೂ ಸುಚೇತನ್ ಜೊತೆ ಬೈಕಿನಲ್ಲಿ ವಾಪಾಸು ಮನೆಗೆ ಬರುವಾಗ ಕೋಟೇಶ್ವರ ಗ್ರಾಮದ ಕುಂಬ್ರಿ ಸರ್ಕಲಿನಲ್ಲಿ ಪರಿಚಿತರಾದ ಶ್ರೇಯಸ್, ಪ್ರತೀಕ್, ನವೀನ್, ಸುನೀಲ್, ಚೇತನ್ ಎಂಬುವರು ಸೇರಿ ಬೈಕ್ ತಡೆದು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಬಳಿಕ ಶ್ರೇಯಸ್ ಎಂಬಾತ ಏಕಾಏಕಿಯಾಗಿ ಅವಾಚ್ಯವಾಗಿ ಬೈದು ಸೋಡಾ ಬಾಟಲಿಯಿಂದ ಸಂದೀಪನ ತಲೆಗೆ ಹೊಡೆದಿದ್ದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ.

ಸಂದೀಪನ ಸ್ನೇಹಿತರಾದ ಜೀವನ್ ಮತ್ತು ಸುಚೇತನ್ ಜಗಳ ಬಿಡಿಸಿದ್ದು ಆರೋಪಿಗಳು ಓಡಿಹೋಗಿದ್ದಾರೆ. ಗಾಯಗೊಂಡ ಸಂದೀಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular