spot_img
23.6 C
Udupi
Tuesday, March 28, 2023
spot_img
spot_img
spot_img

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಮುಂಬೈ: ಮಹಾರಾಷ್ಟ್ರದ ಮುಂಬೈನ ಮಲಾಡ್‌ ಪ್ರದೇಶದ ಉದ್ಯಾನವೊಂದಕ್ಕೆ ಹಿಂದಿನ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಇಟ್ಟಿದ್ದ ‘ಟಿಪ್ಪು ಸುಲ್ತಾನ್‌ ಉದ್ಯಾನ’ ಹೆಸರನ್ನು ಬದಲಿಸಲು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಈ ಹಿಂದೆ ಉದ್ಯಾನಕ್ಕೆ ಟಿಪ್ಪು ಸುಲ್ತಾನ್‌ ಹೆಸರು ವಿರೋಧಿಸಿ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಿಸಿ ಮರುನಾಮಕರಣಗೊಳಿಸುವಂತೆ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಸಚಿವ ಮಂಗಲ್‌ ಪ್ರಭಾತ್‌ ಲೋಧಾ ಆದೇಶಿಸಿದ್ದಾರೆ.
“ಅಂತಿಮವಾಗಿ ಸತ್ಯಕ್ಕೆ ಗೆಲುವು. ಸಕಲ ಹಿಂದೂ ಸಮಾಜದ ಪ್ರತಿಭಟನೆ ಮತ್ತು ಗೋಪಾಲ್‌ ಶೆಟ್ಟಿ ಅವರ ಒತ್ತಾಯ ಪರಿಗಣಿಸಿ ಮಲಾಡ್‌ ಉದ್ಯಾನದ ಹೆಸರನ್ನು ಮರುನಾಮಕರಣಕ್ಕೆ ನಿರ್ಧರಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಲಾಗಿದೆ’ ಎಂದು ಲೋಧಾ ಟ್ವೀಟ್‌ ಮಾಡಿದ್ದಾರೆ

Related Articles

Stay Connected

0FansLike
3,752FollowersFollow
0SubscribersSubscribe
- Advertisement -

Latest Articles