ಮಂಗಳೂರು: ಆನೆ ಗುರು ಸೇವಾ ಪರಿಷತ್ ಮಹಾಮಂಡಲ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ಸಮಾಜದ 5ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ “ಜ್ಞಾನ ವಿಕಾಸ ಶಿಬಿರ”ವು ಮೇ. 12, 2024 ರಿಂದ ಮೇ. 19, 2024 ವರೆಗೆ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಯೋಗ, ಧ್ಯಾನ, ನಿತ್ಯ ಪಠನ ಶ್ಲೋಕ, ಸುಭಾಷಿತ, ಕಥೆಗಳು, ಭಜನೆ ಹಾಗೂ ಕುಣಿತ ಭಜನೆ, ಆಟೋಟ, ಚಿತ್ರಕಲೆ, ಮಣ್ಣಿನ ಕಲಾಕೃತಿ ರಚನೆ, ಪೇಪರ್ ಕ್ರಾಫ್ಟ್ ಹೇಗೆ ಮಕ್ಕಳಿಗೆ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಶಿಬಿರದ ಪ್ರವೇಶ ಶುಲ್ಕ ₹500.