ಹೆಬ್ರಿ : ಶ್ರೀ ಅನಂತಪದ್ಮನಾಭ ಆಟೋರಿಕ್ಷಾ ಚಾಲಕ ಮಾಲಕರ ಸಂಘ (ರಿ.) ಹೆಬ್ರಿ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘ ಹೆಬ್ರಿ, ಶ್ರೀ ಮಹಾಗಣಪತಿ ಆಟೋರಿಕ್ಷಾ ಚಾಲಕ ಮಾಲಕರ ಸಂಘ ಮುದ್ರಾಡಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮುನಿಯಾಲು ಹೆಬ್ರಿ, ಮಾಲಕರು ಮತ್ತು ಸಿಬ್ಬಂದಿ ವರ್ಗ ರೈತಸೇವಾ ಗ್ರಾಮೋದ್ಯೋಗ ಕನ್ಯಾನ ಹೆಬ್ರಿ, ಶ್ರೀ ಭರತ್ ಕುಮಾರ್ ಶೆಟ್ಟಿ, ಮನು ಲಾ ಚೇಂಬರ್ ಹೆಬ್ರಿ , ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಜು. 6ರಂದು ಬೆಳಿಗ್ಗೆ 9-00 ಗಂಟೆಯಿಂದ 1 ಗಂಟೆಯವರೆಗೆ ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಲಿದೆ.