ಕಾರ್ಕಳ ಟೈಗರ್ಸ್, ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಸರಕಾರಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರಕಾಡು ಉಡುಪಿ,ಇವರ ಸಹಯೋಗದಿಂದ ಬೃಹತ್ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರವು ದಿನಾಂಕ 07/07/2024 ರಂದು ಗುರುದೀಪ್ ಗಾರ್ಡನ್ ಸಾಲ್ಮರ ಕಾರ್ಕಳದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಕೆ. ಆರ್. ಜೋಶಿ ಅಧ್ಯಕ್ಷರು ನಡೆಸಿಕೊಟ್ಟರು. ಕಾರ್ಕಳ ರೆಡ್ ಕ್ರಾಸ್ ಮುಖ್ಯ ಅತಿಥಿ ಡಾಕ್ಟರ್ ವೀಣಾ ಕುಮಾರಿ ಎಮ್. ಮತ್ತು ಪ್ಯಾಥಲೋ ಜಿಸ್ಟ್ ಬಿ. ಸಿ. ಎಂ. ಒ. ಡಿ. ಎಚ್. ಉಡುಪಿ ಭಾಗವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಪ್ರಶಾಂತ್ ಕಾಮತ್ ಉದ್ಯಮಿ ಹಾಗೂ ಸಮಾಜ ಸೇವಕರು ಭಾಗವಹಿಸಿದರು.,
ಸ್ವಯಂ ಪ್ರೇರಿತ ರಕ್ತ ದಾನ ಶಿಬಿರದಲ್ಲಿ ಬೋಳ ಪ್ರಶಾಂತ್ ಕಾಮತ್ ರವರು ಪೇರಳೆ ಗಿಡವನ್ನು ನೀಡುವ ಮುಖಾಂತರ ಮೆಚ್ಚುಗೆಗೆ ಪಾತ್ರರಾದರು.
ಸ್ವಯಂ ಪ್ರೇರಿತ ರಕ್ತ ದಾನ ಶಿಬಿರದಲ್ಲಿ 125ಕ್ಕೂ ಅಧಿಕ ಘಟಕ ಸಂಗ್ರಹಿಸಿದ್ದು ಹಾಗು ಸ್ವಯಂ ಪ್ರೇರಿತ ರಕ್ತದಾನ ಮಾಡಿದವರಿಗೆ ಬೋಳ ಪ್ರಶಾಂತ್ ಕಾಮತ್ ರವರು ಪೇರಳೆ ಗಿಡವನ್ನು ನೀಡುವ ಮುಖಾಂತರ ಮೆಚ್ಚುಗೆಗೆ ಪಾತ್ರರಾದರು.