ಸುರತ್ಕಲ್: ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದ ಸಮಾಜ ಸೇವಕ ಮೊಹಮ್ಮದ್ ಇಲ್ಯಾಸ್ ಚೊಕ್ಕಬೆಟ್ಟು ಇವರು ‘ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ’ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಪ್ರತಿವರ್ಷ ಸಾಧಕರನ್ನು ಗುರುತಿಸಿ ಕೊಡಮಾಡುವ ಈ ಪ್ರಶಸ್ತಿಗೆ ಪ್ರಸ್ತುತ ವರ್ಷ ಮೊಹಮ್ಮದ್ ಇಲ್ಯಾಸ್ ಚೊಕ್ಕಬೆಟ್ಟು ಆಯ್ಕೆಯಾಗಿದ್ದು, ನ.30ರಂದು ಮೈಸೂರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.