ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಯ ವಿಚಾರದಲ್ಲಿ ಪುರಸಭೆಯು ಉತ್ತಮವಾದ ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದ್ದು, ನಿಕಟಪೂರ್ವ ಅಧ್ಯಕರಾದ ಪ್ರಸಾದ್ ಕುಮಾರ್ ರವರು ಕೂಡ ಸ್ವಚ್ಛತೆ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕೆಲಸಗಳನ್ನು ಮಾಡುತ್ತಿದ್ದರು.
ಕಳೆದ ಪುರಸಭಾ ಸಭೆಯಲ್ಲಿ ಕೂಡ ಎಲ್ಲೆಂದರಲ್ಲಿ ಕಸ ಬಿಸಾಡುವುದರ ಬಗ್ಗೆ ಮತ್ತು ಅಂಗಡಿ, ಮನೆಯವರು ಕಸ ವಿಂಗಡಿಸಿದೆ ಕೊಡದಿರುವ ಬಗ್ಗೆ ಚರ್ಚೆಗಳಾಗಿತ್ತು. ಇದೀಗ ಪುರಸಭಾ ಉಪಾಧ್ಯಕ್ಷರು ಖುದ್ದು ಕಾರ್ಯಾಚರಣೆಗೆ ಇಳಿದಿದ್ದು, ಕಳೆದ 10ದಿನಗಳಿಂದ ನಗರ ಪ್ರದೇಶದಲ್ಲಿ ಪೌರಾಕಾರ್ಮಿಕರೊಂದಿಗೆ ಬೆಳ್ಳಂಬೆಳಗೆ ತೆರಳಿ ಕಸ ವಿಂಗಡಿಸದೆ ನೀಡುವ ಅಂಗಡಿ, ಹೋಟೆಲ್ ಗಳ ಮಾಹಿತಿ ಪಡೆದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಅಲ್ಲಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಿ ಕಸಬಿಸಾಡುವವರಿಗೆ ದಂಡ ವಿಧಿಸಲಾಗುವುದೆಂದು ಮುಖ್ಯಧಿಕಾರಿಯವರು ತಿಳಿಸಿರುತ್ತಾರೆ.
ನಗರವನ್ನು ಸ್ವಚ್ಛವಾಗಿಡುವುದು ಕೇವಲ ಪುರಸಭೆಯ ಕೆಲಸ ಮಾತ್ರವಲ್ಲ, ಎಲ್ಲಾ ನಾಗರಿಕರು, ಅಂಗಡಿ, ಹೋಟೆಲ್ ಮಾಲೀಕರು ಕೂಡ ಸಹಕರಿಸಬೇಕು ಎಂದು ಅಧ್ಯಕ್ಷರಾದ ಜಯಶ್ರೀ ಕೇಶವ್ ರವರು ವಿನಂತಿಸಿದ್ದಾರೆ