ಮೂಡುಬಿದಿರೆ: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ ಮತ್ತು ಪ್ರಾಚ್ಯ ಸಂಶೋಧನೆ ಕೇಂದ್ರ – ಉಡುಪಿ (ರಿ) (ಅಂಗ ಸಂಸ್ಥೆ: NTC-AOM) ಸಹಯೋಗದಲ್ಲಿ ಜೂನ್ 22 ಶನಿವಾರ, ಒಂದು ದಿನದ ಪ್ರಾಚೀನ ತಾಡೋಲೆ, ಶಾಸನ-ತಾಮ್ರಪತ್ರ, ಕೈಫಿಯತ್-ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರವು “ಶ್ರೀ ರಮಾ ರಾಣಿ ಶೋಧ ಸಂಸ್ಥಾನ ಶ್ರೀ ಜೈನ ಮಠ ಮೂಡು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ”ಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4:00 ವರೆಗೆ ನಡೆಯಲಿದೆ.
ಕಾರ್ಯಗಾರದ ಉದ್ಘಾಟನೆಯನ್ನು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ಅವರು ಶುಭಾಶೀರ್ವಾದಗಳೊಂದಿಗೆ ನೆರವೇರಿಸಲಿದ್ದಾರೆ.
ಸಂಪನ್ಮೂಲ ನಿರ್ವಹಣಕಾರರು:
- ಪ್ರೊ. ಎಸ್.ಎ. ಕೃಷ್ಣಯ್ಯ, ಅಧ್ಯಯನ ನಿರತ ನಿರ್ದೇಶಕರು, ಮೈಸೂರು ವಿಶ್ವವಿದ್ಯಾನಿಲಯ ORI ಉನ್ನತ ಸಮಿತಿ ಸದಸ್ಯರು, ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ (ಅಂಗ ಸಂಸ್ಥೆ: NTC-AOM)
ಗಣ್ಯ ಉಪಸ್ಥಿತಿ:
- ಡಾ. ಉಮಾನಾಥ ಶೆಣೈ, ಇತಿಹಾಸಕಾರರು (ಶಾಸನ ಸಂರಕ್ಷಣೆ)
- ಶ್ರೀ ಶೃತೇಶ ಆಚಾರ್ಯ, ಮೂಡುಬೆಳ್ಳೆ-ಶಿರ್ವ ಕಾಲೇಜು ಇತಿಹಾಸ ಉಪನ್ಯಾಸಕರು (ಬಂಗರ ಶಾಸನ ಮರು-ಓದುವಿಕೆ)
- ಶ್ರೀ ರಾಘವೇಂದ್ರ ಅಮೀನ್, ನಿವೃತ್ತ ಚಿತ್ರಕಲಾ ಉಪನ್ಯಾಸಕರು-ಹಂಪಿ ವಿಶ್ವವಿದ್ಯಾಲಯ, ಜಂಗಮಮಠ (ನಿವೃತ್ತ ಲಲಿತ ಕಲಾ ಅಕಾಡೆಮಿ ಸದಸ್ಯರು)
ಸಮಾರೋಪ ವಿಶೇಷ ಉಪಸ್ಥಿತಿ:
- ಡಾ. ಎಸ್.ಎನ್. ಅಮೃತಮಲ್ಲ, ಹಿರಿಯ ಪತ್ರಕರ್ತರು
- ಶ್ರೀ ರಘುರಾಮ್, ಹಿರಿಯ ಪತ್ರಕರ್ತರು
- ಸ್ಥಳೀಯ ಹಿತಚಿಂತಕರು
ವಿದ್ಯಾರ್ಥಿಗಳಿಗಾಗಿ:
- ಒಂದು ದಿನದ ತಾಡೋಲೆ ಸಂರಕ್ಷಣಾ ಕಾರ್ಯಗಾರ
- ಸ್ವಅಧ್ಯಯನ-ಪರಿಸರಾಸಕ್ತರಿಗೆ ‘ಕ್ಷಿತಿರೂಹ ನೋಂಪಿ ಸಂಕಲ್ಪ (ಗಿಡ ಮರಗಳನ್ನು ಬೆಳೆದು ದಾನ ನೀಡುವ ಆಶಯ) “ಹಸುರು ಹೊನ್ನ ಬಿತ್ತೋಣ ಜಗದಗಲ” ಪರಿಕಲ್ಪನೆ
- ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ವ್ಯವಸ್ಥೆ
- ಕಾರ್ಯಗಾರದಲ್ಲಿ ಪೂರ್ತಿ ದಿನ ಪಾಲ್ಗೊಳ್ಳುವ 16 ವರ್ಷ ಮೇಲ್ಪಟ್ಟ ಮತ್ತು 50 ವರ್ಷ ಒಳಗಿನ ಆಸಕ್ತಿ ಹೊಂದಿದ ಎಲ್ಲರಿಗೂ ಮುಕ್ತ ಅವಕಾಶ, ಪ್ರಮಾಣ ಪತ್ರ
- ವಿದ್ಯಾರ್ಥಿ ಹೆಸರು ನೋಂದಣಿ ಇಮೇಲ್ ಮೂಲಕ: jainkashi1@gmail.com ಅಥವಾ prachyasanchaya@gmail.com, ಸ್ಥಿರ ಕರೆ: 08258-236418
ವಿದ್ಯಾರ್ಥಿಗಳು ತಮ್ಮ ಕಾಲೇಜು ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಫೋಟೋ ಕಾಪಿ ಕಡ್ಡಾಯವಾಗಿ ಹಾಜರು ಪಡಿಸಬೇಕು.