Saturday, May 24, 2025
Homeಧಾರ್ಮಿಕಮೂಡುಬಿದಿರೆ: ಸಾವಿರ ಕಂಬದ ಬಸದಿಯಲ್ಲಿ ಧ್ವಜರಾಹೋಣ: ಜಲ್ಲಾದಿಕಾರಿ ಭಾಗಿ

ಮೂಡುಬಿದಿರೆ: ಸಾವಿರ ಕಂಬದ ಬಸದಿಯಲ್ಲಿ ಧ್ವಜರಾಹೋಣ: ಜಲ್ಲಾದಿಕಾರಿ ಭಾಗಿ

ಮೂಡುಬಿದಿರೆ: ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ದಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಸಾವಿರ ಕಂಬ ಬಸದಿ ವಾರ್ಷಿಕೋತ್ಸವ ರಥೋತ್ಸವ ಧ್ವಜಾರೋಹಣದ ದಿನ ಜಿಲ್ಲಾ ಪೊಲೀಸ್ ವರಿಸ್ಟಾಧಿ ಕಾರಿ, ಐ ಪಿ ಯಸ್, ಸಿ ಬಿ ಋಷ್ಯoತ್ ಜತೆಗೆ 19-4-2024 ರಂದು ಸಂಜೆ 5 ಗಂಟೆಗೆ ಆಗಮಿಸಿದರು. 18,ಬಸದಿ ಆಡಳಿತದಾರರಾದ ಪ.ಪೂ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಪಟ್ಟಾಚಾರ್ಯ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಬಸದಿ ದರ್ಶನ ಮಾಡಿ ಶ್ರೀ ಕ್ಷೇತ್ರದ ಇತಿಹಾಸ ಪೂಜಾ ಮಾಹಿತಿ ನೀಡಿದರು ಹಾಗೂ ಶ್ರೀ ಕ್ಷೇತ್ರದ ವತಿಯಿಂದ ಪ್ರಸಾದ ಸ್ಮರಣಿಕೆ ನೀಡಿ ಗೌರವಿಸಿ ಹರಸಿ ಆಶೀರ್ವಾದ ಮಾಡಿದರು. ಬಸದಿ ಮುಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ ಕುಮಾರ್, ಆದರ್ಶ್ ಉಪಸ್ಥಿತರಿದ್ದರು. ಪುತ್ತಿಗೆ ಗ್ರಾಮ ಲೆಕ್ಕಿಗ ಕಿಶೋರ್,ವ್ಯವಸ್ಥಾಪಕ ಸಂಜಯಂತ ಕುಮಾರ್ ಉಪಸ್ಥಿತರಿದ್ದರು. 18.4.24 ರಿಂದ 24.4.2024ರ ವರೆಗೆ ಸಾವಿರ ಕಂಬದ ಬಸದಿ ವಾರ್ಷಿಕ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು ಸಂಜೆ 5.35ಕ್ಕೆ ಧ್ವಜಾರೋಹಣ ದೊಂದಿಗೆ ಆರಂಭ ಗೊಂಡಿತು.

RELATED ARTICLES
- Advertisment -
Google search engine

Most Popular