Saturday, May 24, 2025
Homeಧಾರ್ಮಿಕಮೂಡುಬಿದಿರೆ : ಕುಂಥು ಸಾಗರ ಮುನಿ ಮಹಾರಾಜ್ ಜೈನಕಾಶಿಗೆ ಭೇಟಿ

ಮೂಡುಬಿದಿರೆ : ಕುಂಥು ಸಾಗರ ಮುನಿ ಮಹಾರಾಜ್ ಜೈನಕಾಶಿಗೆ ಭೇಟಿ

ಮೂಡುಬಿದಿರೆ : ಜೈನಕಾಶಿ ಮೂಡುಬಿದಿರೆಯಲ್ಲಿ ಉಪಸ್ಥಿತ ಇರುವ ಪ.ಪೂ 108 ಕುಂಥು ಸಾಗರ ಮುನಿ ಮಹಾರಾಜ್ ಮೂಡುಬಿದಿರೆ ಶ್ರೀ ಮಠದಿಂದ 20-4-24 ರಂದು 3.00ಗಂಟೆಗೆ ಕಾರ್ಕಳ ಪುರ ಪ್ರವೇಶ ಮಾಡುವ ನಿಮಿತ್ತ ವಿಹಾರ ಕೈಗೊಂಡರು. ಮುನಿ ವರ್ಯರು ಸಮಾಧಿಸ್ಥ ರಾಷ್ಟ್ರ ಸಂತ ಆಚಾರ್ಯ ವಿದ್ಯಾ ಸಾಗರ ಶಿಷ್ಯ ರಾಗಿದ್ದು ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುಗಳ ಉಪಸ್ಥಿತಿಯಲ್ಲಿ 19-4-24ರಂದು ಸಂಜೆ 4.00 ಗಂಟೆಗೆ ಶ್ರೀಮಠದ ತ್ಯಾಗಿ ನಿವಾಸದಲ್ಲಿ ಪಾದ ಪೂಜೆ ಆರತಿ ಕಾರ್ಯಕ್ರಮ ನಡೆಸಿ ಪೂಜ್ಯರನ್ನು ಬೆಳುವಾಯಿ ಕಾರ್ಕಳ ಜೈನ ಕ್ಷೇತ್ರ ವಿಹಾರಕ್ಕೆ ಬೀಳ್ಕೊಡಲಾಯಿತು. ಆಶೀರ್ವಾದ ನೀಡಿದ ಕುಂಥು ಸಾಗರ ಮುನಿಗಳು ದೇವ ಶಾಸ್ತ್ರ ಗುರುಗಳ ಭವ್ಯ ಕ್ಷೇತ್ರ ಮೂಡುಬಿದಿರೆ ಧರ್ಮದಿಂದ ಸಂಸ್ಕಾರ ಸಂಸ್ಕೃತಿಯ ರಕ್ಷಣೆ ಸಾಧ್ಯ ಎಲ್ಲರೂ ತಮ್ಮ ಧರ್ಮ ಶ್ರದ್ದೆಯಿಂದ ನಿತ್ಯ ಆಚರಣೆ ಮಾಡಿ ಎಂದು ನುಡಿದರು. ಸ್ವಸ್ತಿಶ್ರೀ ಭಟ್ಟಾರಕರು ಸಂಘದ ಪರಿಚಾರಕರನ್ನು ಗೌರವಿಸಿ ಹರಸಿ ಆಶೀರ್ವಾದ ಮಾಡಿದರು. ಸನತ್ ಕುಮಾರ್, ಆದಿತ್ಯ ಜೈನ್, ಸಂಜಯಂತ ಕುಮಾರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular