Friday, May 23, 2025
Homeಮುಲ್ಕಿಮೂಲ್ಕಿ ರಾಮಕೃಷ್ಣ ಪೂಂಜಾ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ

ಮೂಲ್ಕಿ ರಾಮಕೃಷ್ಣ ಪೂಂಜಾ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ

ಮುಲ್ಕಿ: ಇಂದಿನ ದಿನಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆಯಿದ್ದು ಉತ್ತಮ ಶಿಕ್ಷಣ ಪಡೆದು ಯಶಸ್ಸನ್ನು ಗಳಿಸಬೇಕೆಂದು ಉದ್ಯಮಿ ಶ್ರೀ ಆದಿತ್ಯ ಎ ಪೂಂಜಾ ಹೇಳಿದರು. ತೋಕೂರಿನ ತಪೋವನದ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜರಗಿದ ಮೂಲ್ಕಿ ರಾಮಕೃಷ್ಣ ಪೂಂಜಾ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ,, ದಿ. ಐ ಆನಂದ ರಾವ್ ಅವರ ಮಾತಾ ಪಿತರ ಸ್ಮರಣಾರ್ಥ, ಯಾಜಿ ದಿವಾಕರ ಭಟ್ ತನ್ನ ಮಾತಾ ಪಿತರ ಸ್ಮರಣಾರ್ಥ, ಗೀತಾ ವೆಂಕಟರಾಮನ್ ಹಾಗು ಯೋಗೀಶ ಪೂಜಾರಿ ತನ್ನ ತೀರ್ಥರೂಪರ ಸ್ಮರಣಾರ್ಥ ಕೊಡಮಾಡುವ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ತೆಯ ಪ್ರಾಚಾರ್ಯ ಹರಿ ಎಚ್‌ ವಹಿಸಿದ್ದು ರು ರೂ 70,000 ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಸಂಸ್ತೆಯ ತರಬೇತು ಅದಿಕಾರಿ .ರಾಘವೇಂದ್ರ ಅಡಿಗ ಎನ್, ಕಚೇರಿ ಅದೀಕ್ಷಕ .ಹರೀಶ್ಚಂದ್ರ ಎ ಉಪಸ್ತಿತರಿದ್ದರು. ಸುರೇಶ ಎಸ್ . ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular