ಮೂಲ್ಕಿ: ಮೂಲ್ಕಿ ಶಾಂಭವಿ ಜೇಸಿಐ ವತಿಯಿಂದ ಮೂಲ್ಕಿ ಹೊಟೇಲ್ ಆದಿದನ್ ನ ಸಭಾಂಗಣದಲ್ಲಿ ಜರಗಿದ ಮೌನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಿಲ್ಪಾಡಿಯ ಆಶಾ ಕಾರ್ಯಕರ್ತೆ ಮಂಜುಳಾ ತಾರನಾಥ ದೇವಾಡಿಗರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಶಾಂಭವಿ ಜೇಸಿಐನ ಅಧ್ಯಕ್ಷ ಸತೀಶ್ ಕಿಲ್ಪಾಡಿ ವಹಿಸಿದ್ದು ಕಾರ್ಯಕ್ರಮದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಾದ ಶಾಂಭವಿ ಜೇಸಿ ಸಂಸ್ತೆಯ ಪೂರ್ವಾಧ್ಯಕ್ಷ ಜೇಸಿ ಜೆಎಫ್ ಎಮ್ ಪ್ರಕಾಶ್ ಸುವರ್ಣ ಮತ್ತು ಹಿರಿಯ ಸದಸ್ಯ ಸರ್ವೋತ್ತಮ ಅಂಚನ್ ರನ್ನು ಗೌರವಿಸಲಾಯಿತು.
ಸಂಸ್ತೆಯ ನಿಕಟಪೂರ್ವಾಧ್ಯಕ್ಷ ಅನಿಲ್ ಕೊಲಕಾಡಿ,ಪೂವಾಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ತಿತರಿದ್ದರು.