ಮುಲ್ಕಿ: ಕಾರ್ಗಿಲ್ ಯುದ್ದಕ್ಕಾಗಿ ಹಲವು ಯೋಧರು ಬಲಿದಾನ ಮಡಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರು ಶಾಂತಪ್ಪ ಹೇಳಿದರು. ಅವರು ಮೂಲ್ಕಿ ತಾಲೂಕು ಪಂಚಾಯತ್ ಕಚೇರಿ ಸಭಾಭವನದಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದರು ನಾನು ಮಾಜಿ ಸೈನಿಕನಾಗಿದ್ದು ಕಾರ್ಗಿಲ್ ಯುದ್ದ ಆಗುವ ಸಂದರ್ಭ ನಾನೂ ಕೂಡ ಸೈನ್ಯದಲ್ಲಿದ್ದೆ, ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಮತ್ತು ಜಾರ್ಜ್ ಪೆರ್ನಾಂಡೀಸ್ ಅವರ ಸರಿಯಾದ ನಿರ್ದಾರದಿಂದ ಯುದ್ದ ಗೆಲ್ಲಲು ಸಾದ್ಯವಾಯಿತು. ಆದರೆ ಪಾಕಿಸ್ಥಾನ ತನ್ನ ಬುದ್ದಿಯನ್ನು ಬಿಡಲಿಲ್ಲ ಎಂದರು, ಈ ಸಂದರ್ಭ ನಿವೃತ್ತ ಸೈನಿಕರಾದ ಕಾರ್ಯನಿರ್ವಹಣಾಧಿಕಾರಿಯವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು. ವಿವಿಧ ಪಂಚಾಯತ್ ಅಧ್ಯಕ್ಷರು, ಅಧಿಕಾರಿ ಗಳಾದ ಯೋಗೀಶ್, ಕುಸುಮ, ಮೋಹನ್ ದಾಸ ಪಡುಪಣಂಬೂರು, ಅನೀಲ್, ಶೈಲಜಾ, ನಾರಾಯಣ ಮೂಲ್ಯ, ಹರಿಶ್ಚಂದ್ರ, ಸಿಬಂಧಿಗಳಾದ ರೂಪ, ಮಧುರ, ರುತೇಶ್, ಮುಕೇಶ್ ಮತ್ತಿತರರು ಉಪಸ್ಥಿತರಿದ್ದರು. ಕೆಮ್ರಾಲ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.