ಜ್ವರ ಬಂದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ಸಾವನ್ನಪ್ಪಿದ್ದ ಪ್ರಕರಣ: ಪಶುವೈದ್ಯಗೆ ನ್ಯಾಯಾಂಗ ಬಂಧನ

0
226

ಬೆಳ್ತಂಗಡಿ: ಜ್ವರ ಬಂದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿದ್ದ ಆರೋಪದಲ್ಲಿ ಪಶುವೈದ್ಯ ಕುಮಾರ್ ಬಂಧನವಾಗಿದೆ. ಬಂಧಿತ ಕುಮಾರ್ ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅರಸಿನಮಕ್ಕಿ ಪಶುಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಕುಮಾರ್ ಸೋಮವಾರ ಸಂಜೆಎ ಕೊಕ್ಕಡದಲ್ಲ್ಲಿ ಪಟ್ರಮೆ ನಿವಾಸಿ ಕೃಷ್ಣಪ್ಪ ಎಂಬವರಿಗೆ ಹೊಡೆದ ಕಾರಣ ಕುಸಿದುಬಿದ್ದು ಮೃತಪಟ್ಟಿದ್ದರು.

ಮೃತರ ಪತ್ನಿ ಭಾರತಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆದ.

LEAVE A REPLY

Please enter your comment!
Please enter your name here