Monday, May 19, 2025
HomeUncategorizedಕಲಾಕುಂಚದಿಂದ ನಲ್ಲೂರು ಲಕ್ಷ್ಮಣ್‌ ರಾವ್‌ ಅವರಿಗೆ “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ

ಕಲಾಕುಂಚದಿಂದ ನಲ್ಲೂರು ಲಕ್ಷ್ಮಣ್‌ ರಾವ್‌ ಅವರಿಗೆ “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ


ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕದ ೬೯ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆಯ ಸಮಾಜ ಸೇವಕ, ವಿವಿಧ ಸಂಘಟನೆಗಳ ಸಂಘಟಕ ನಲ್ಲೂರು ಲಕ್ಷö್ಮಣ್‌ರಾವ್ ನರಹರಿ ರೇವಣಕರ್ ರವರನ್ನು “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಡಿಸೆಂಬರ್ 1 ರಂದು ಭಾನುವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಠಿಣ ಪರಿಶ್ರಮದಿಂದ ನಿರಂತರ ಸುಮಾರು ಅರ್ಧ ಶತಮಾನಗಳಿಂದ ಕಲೆ, ಸಾಹಿತ್ಯ, ಸಂಗೀತ, ಧಾರ್ಮಿಕ, ಸಮಾಜ ಸೇವೆ, ಅಂಗವಿಕಲರಿಗೆ ಉಚಿತ ಆರೋಗ್ಯ ಸೇವೆಗಳನ್ನು ಗುರುತಿಸಿ ನಲ್ಲೂರು ಲಕ್ಷ್ಮಣ್‌ ರಾವ್‌ರವರನ್ನು ಈ ಪ್ರಶಸ್ತಿಗೆ ಭಾಜನರಾಗುತ್ತ್ತಿದ್ದು ಇವರಿಗೆ ಕಲಾಕುಂಚ, ದೈವಜ್ಞ ಸಮಾಜ, ರೇವಣಕರ್ ಪರಿವಾರ, ನವಜ್ಯೋತಿ ಸೇವಾ ಸಂಸ್ಥೆ, ಶಾರದಾ ವಿದ್ಯಾಸಂಸ್ಥೆ, ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನ ಹಾಗೂ ನಲ್ಲೂರು ಕುಟುಂಬದ ಸರ್ವ ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular