ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ನಂದಾವರ ಇಲ್ಲಿ 12.02.2025 ರಿಂದ 17.02.2025 ವರೆಗೆ ಜರುಗುವ ವರ್ಷಾವಧಿ ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ಜರಗುವಂತೆ, ಕ್ಷೇತ್ರದಲ್ಲಿ ಜರಗಿದ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆಯ 11ನೇಯ ಉದ್ಯಾಪನೆ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್ ಕಾರ್ಯನಿರ್ವಹಣಾಧಿಕಾರಿ ಪ್ರವೀಣ, ಪ್ರಬಂಧಕ ರಾಮಕೃಷ್ಣ ಭಂಡಾರಿ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಸಿ. ಭಂಡಾರಿ, ಕೆ ರಾಧಾಕೃಷ್ಣ ಆಳ್ವ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಮೋಹನ ದಾಸ ಹೆಗಡೆ ಮೋಹನ ದಾಸ ಪೂಜಾರಿ ಅಭಿವೃದ್ಧಿ ಸಮಿತಿಯ ದಾಮೋದರ ಬಿ ಎಂ. ಸಂದೀಪ್ ಕುಮಾರ ಮೊದಲಾದವರು ಉಪಸ್ಥಿತರಿದ್ದರು.