Tuesday, May 13, 2025
Homeಕುಂದಾಪುರನಾವೂರು: "ಕಂಪ್ಯೂಟರ್ ಹಾಗೂ ಪ್ರೊಜೆಕ್ಟೆರ್ ಹಸ್ತಾಂತರ

ನಾವೂರು: “ಕಂಪ್ಯೂಟರ್ ಹಾಗೂ ಪ್ರೊಜೆಕ್ಟೆರ್ ಹಸ್ತಾಂತರ

ಸಮಾಜ‌ಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಿದಷ್ಟು ನಮ್ಮ ಮನಸ್ಸಿಗೆ ನೆಮ್ಮದಿ ದೇವರು ನಮಗೆ ಕರುಣಿಸಿದ ಆಯುಷ್ಯವನ್ನು ಸಾರ್ಥಕತೆ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಎಂದು ಸಮಾಜ ಸೇವಕರು ಪ್ರಗತಿ ಪರ ಕೃಷಿಕರಾದ ಆದಿರಾಜ್ ಜೈನ್ ದೇವಶ್ಯಪಡೂರು ಇವರು ನುಡಿದರು. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿನಲ್ಲಿ,ಮಾತೃಭೂಮಿ ಸೇವಾ ಸಂಘ ನಾವೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ .ರಿ. ಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು ಇವುಗಳ ಜಂಟಿ ಆಶ್ರಯದಲ್ಲಿ, ಸೇವ್ ಲೈಫ್ ಚಾರಿಟೇಬಲ್ ‌ಟ್ರಸ್ಟ್ .ರಿ. ಮಂಗಳೂರು ಇವರು ಕೊಡುಗೆಯಾಗಿ ನೀಡಿದ “ಕಂಪ್ಯೂಟರ್ ಹಾಗೂ ಪ್ರೊಜೆಕ್ಟೆರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸೇವ್ ಲೈಫ್ ಸಂಸ್ಥೆಯ ಸ್ಥಾಪಕರು ಹಾಗೂ ಮುಖ್ಯಸ್ಥರಾದ ಶ್ರೀ ಅರ್ಜುನ್ ಭಂಡಾರ್ಕರ್ ಇವರು ಕಾರ್ಯಕ್ರಮ ಉದ್ಘಾಟಿಸಿ ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ಹಸ್ತಾಂತರ ಮಾಡಿದರು.
ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಅಧ್ಯಕ್ಷತೆ ವಹಿಸಿದರು.ನಾವೂರು ಗ್ರಾಮ ಪಂಚಾಯತ್ ನ ಸದಸ್ಯರಾದ ತ್ರಿವೇಣಿ ಸಮಾಜಿಕ ಮುಖಂಡರಾದ ಶ್ರೀ ಮೋಹನ್ ಕೊಟ್ಟಾರಿ ಪೂಪಾಡಿಕಟ್ಟೆ, ಮಾತೃಭೂಮಿ ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು, ಸ್ಪಂದನ ಫ್ರೆಂಡ್ಸ್ ನ ಸಂಚಾಲಕರಾದ ಸಂಪತ್ತ್ ಸನಿಲ್ ಅಲ್ಲಿಪಾದೆ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್ (ಸಿ.ಆರ್.ಪಿ) ನಾವೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸತೀಶ್ ಪದವು ನಾವೂರು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಸುನಿತಾ ಶಾಂತಿ ಪ್ರಸಾದ್ ಜೈನ್ ಮಾರಾಯಿದೊಟ್ಟು ಇವರು ಉಪಸ್ಥಿತಿ ‌ಇದ್ದರು.
ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಸುನಿತಾ ಭಾಯಿ ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರಸಿಲ್ಲಾ ಡಿಸೋಜ ಧನ್ಯವಾದಗಳು ಹೇಳಿದರು. ಸಂಘ ನಿರ್ದೇಶಕರಾದ ಸುರೇಶ್ ಎಸ್‌ .ನಾವೂರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular