ವಿಜ್ಞಾತ್ ಶೆಟ್ಟಿಗೆ ನಾಟಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 30ನೇ ಸ್ಥಾನ
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್,ನವದೆಹಲಿ ನಡೆಸಿದ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ಆರ್ಕಿಟೆಕ್ಚರ್ (ಎನ್.ಎ.ಟಿ.ಎ – ನಾಟಾ) ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಪುತ್ತೂರಿನ ಸುಧೀರ್ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ದಂಪತಿ ಪುತ್ರನಾದ ವಿಜ್ಞಾತ್ ಶೆಟ್ಟಿ ನಾಟಾ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 30ನೇ ಸ್ಥಾನಗಳಿಸಿರುತ್ತಾರೆ. ಅಖಿಲೇಶ್ ಎಂ.ಎಸ್ ರಾಜ್ಯ ಮಟ್ಟದಲ್ಲಿ170ನೇ ಸ್ಥಾನಗಳಿಸಿರುತ್ತಾರೆ. ಇವರು ಪುತ್ತೂರಿನ ಸತ್ಯಪ್ರಸಾದ್ ಎಂ ಹಾಗೂ ಉಮಾಶಂಕರಿ ಎಂ.ಎಸ್ ದಂಪತಿಗಳ ಪುತ್ರ.
ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.