Monday, May 12, 2025
Homeತುಳು ಭಾಷೆನ.24: ಕರ್ನಾಟಕ ಕರಾವಳಿ ಮಿತ್ರ ಮಂಡಳಿ(ರಿ.)ಬೆಂಗಳೂರು ಇವರ ಆಶ್ರಯದಲ್ಲಿ ರಾಜಧಾನಿಯಲ್ಲಿ ಕರಾವಳಿ ಉತ್ಸವ.- 2024

ನ.24: ಕರ್ನಾಟಕ ಕರಾವಳಿ ಮಿತ್ರ ಮಂಡಳಿ(ರಿ.)ಬೆಂಗಳೂರು ಇವರ ಆಶ್ರಯದಲ್ಲಿ ರಾಜಧಾನಿಯಲ್ಲಿ ಕರಾವಳಿ ಉತ್ಸವ.- 2024

ಕರ್ನಾಟಕದ ರಾಜಧಾನಿ ಬೆಂಗಳೂರಿನ ಬೆಳವಣಿಗೆಯಲ್ಲಿ,ತುಲುವರ ಪಾತ್ರ ಪ್ರಮುಖವಾದುದು.
ಬೆಂಗಳೂರಿನಲ್ಲೆ ತುಳುವರೇ ಜಾಸ್ತಿ ಇರುವ ದಾಸರಹಳ್ಳಿ, 8th ಮೈಲ್,ನಾಗಸಂದ್ರ ವಲಯದ ತುಲುವರು ಎಲ್ಲಾ ಒಟ್ಟು ಸೇರಿ 1984ನೇ ಇಸವಿಯಲ್ಲಿ ಕಟ್ಟಿದ ಹೆಮ್ಮೆಯ ಕರ್ನಾಟಕ ಕರಾವಳಿ ಮಿತ್ರ ಮಂಡಲಿ(ರಿ.) ಸಂಘಟನೆ ಬೆಂಗಳೂರಿನ ತುಳುವೆರಿಗಾಗಿ ಇದುವೆ ಬರುವ ನವೆಂಬರ್ ತಿಂಗಳ 24 ತಾರೀಕು ಭಾನುವಾರ 8th ಮೈಲ್ ಹತ್ತಿರ ಇರುವ ಸೌಂದರ್ಯ ಶಾಲೆ ಹಾವನೂರು ಬಡಾವಣೆಯ ಮೈದಾನದಲ್ಲಿ ಕರಾವಳಿ ಉತ್ಸವ-2024 ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಿಗ್ಗೆ ದೀಪ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಗಿ, ಮಕ್ಕಳು,ವಯಸ್ಕರಿಗೂ ಸ್ಪರ್ಧೆಗಳು ಹಾಗೆಯೇ ತುಳುನಾಡ ಆಚಾರ ವಿಚಾರೊದ ಬಗೆಗಿನ ಮಾಹಿತಿ,ಜಾಗೃತಿ ಸೇರಿಕೊಂಡು ಈ ಕಾರ್ಯಕ್ರಮ ಭಾರಿ ಅದ್ದೂರಿಯಾಗಿ ರೂಪಿಸಲಾಗಿದೆ.

ಖ್ಯಾತ ಗಾಯಕಿ ಪ್ರತಿಭಾ ಭಟ್ ಮತ್ತು ತಂಡದವರಿಂದ ಭಕ್ತಿ ಭಾವಾಂಜಲಿ ಎಂಬ ಕಾರ್ಯಕ್ರಮ,
ಮಧ್ಯಾಹ್ನ ತುಳುನಾಡ ಶೈಲಿಯ ಊಟೋಪಚಾರ ಕೂಡ ಅಟ್ಟನೆಯಾಗಿದೆ. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ,ಲೋಕಯುಕ್ತದಲ್ಲಿ ಹೆಸರಾದ ನಿವೃತ್ತ ಸುಪ್ರಿಂಕೊರ್ಟಿನ ನ್ಯಾಯಮೂರ್ತಿ ಶ್ರೀ N. ಸಂತೋಷ್ ಹೆಗ್ಡೆ,ಹಾಗೆಯೇ ಸೌಂದರ್ಯ ಸಮೂಹ ವಿದ್ಯಾ ಸಂಸ್ಥೆಗೆಳ ಮುಖ್ಯಸ್ಥೆರಾದ ಸೌಂದರ್ಯ ಶ್ರೀ.ಪಿ ಮಂಜಪ್ಪ,ಉದ್ಯಮಿಗಳಾದ ಶ್ರೀ ಶಶಿಧರ ಶೆಟ್ಟಿ ಬರೋಡ ,ಶ್ರೀ ಗೋಪಾಲ ಶೆಟ್ಟಿ ಸೇರಿದಂತೆ ಕ್ರೀಡಾ ಕ್ಷೇತ್ರೊದ ಸಾಧಕಿ ಒಲಿಂಪಿಯನ್ ಸಹನಾ ಕುಮಾರಿ ಸೇರಿದಂತೆ ಅನೇಕ ಗಣ್ಯರು ಕೂಡ ಪಾಲ್ ಪಡೆಯಲಿದ್ದಾರೆ.

ಅದೇ ದಿನ ಸಂಜೆ ಚೈತನ್ಯ ಕಲಾವಿದರು ಬೈಲೂರು ತಂಡದವರು ಪ್ರಸ್ತುತ ಪಡಿಸುವ ಅಷ್ಟೆಮಿ ಎನ್ನುವ ತುಳು ನಾಟಕ ಸರ್ವ ತುಳುವ ಕಲಾಭಿಮಾನಿಲೆಗಳಿಗಾಗಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕರಾವಳಿ ಮಿತ್ರ ಮಂಡಲಿಯ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular