ಬಂಟ್ವಾಳ: ಇಲ್ಲಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಡ್ರಗ್ಸ್, ಗಾಂಜಾ ಮತ್ತಿತರ ಮಾದಕ ಪದಾರ್ಥಗಳ ಮಾರಾಟ ದಂಧೆ ನಿರಂತರವಾಗಿ ನಡೆಯುತ್ತಿದೆ. ಅಕ್ರಮ ಕಲ್ಲಿನ ಕ್ವಾರೆ ಸಹಿತ ಕೇರಳಕ್ಕೆ ಅಕ್ರಮ ಗೋಸಾಟ ಮತ್ತು ಕೆಂಪು ಮಣ್ಣು ಸಾಗಾಟ ಮತ್ತಿತರ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೊಲೀಸರು ಮೌನವಾಗಿದ್ದಾರೆ. ಕಳೆದ 40 ವರ್ಷಗಳಿಂದ ಹಿಂದೂ ಸಂಸ್ಕೃತಿ ಮತ್ತು ಧರ್ಮ ರಕ್ಷಣೆಗಾಗಿ ಶ್ರಮಿಸುತ್ತಿರುವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಸಮಾಜ ಘಾತುಕ ಶಕ್ತಿಗಳ ಜೊತೆಗೆ ಶಾಂತಿ ಭಂಗದ ನೆಪವೊಡ್ಡಿ ಅನಗತ್ಯ ನೋಟೀಸು ನೀಡುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಸಂಚಾಲಕ ನರಸಿಂಹ ಮಾಣಿ ಆರೋಪಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಇಲ್ಲಿನ ಕೊಡಾಜೆ, ನೇರಳಕಟ್ಟೆ, ಮಂಗಳಪದವು, ಸಾಲೆತ್ತೂರು ಮತ್ತಿತರ ಪ್ರದೇಶಗಳಲ್ಲಿ ಗಾಂಜಾ ತಂಡ ಸುತ್ತಾಡಿಕೊಂಡು ಹೆಣ್ಮಕ್ಕಳಿಗೆ ಕಿರುಕುಳ ಸೇರಿದಂತೆ ಮಧ್ಯರಾತ್ರಿ ತನಕವೂ ಸುತ್ತಾಡುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತು ಕಾಂಗ್ರೆಸ್ ಕೈಗೊಂಬೆಗಳಂತೆ ವತರ್ಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡೀಪಾರು ಮಾಡುವ ಬದಲಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಅವರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಧ್ಯವತರ್ಿಗಳು ತುಂಬಿಕೊಂಡಿದ್ದು, ಪೊಲೀಸರೇ ಸ್ವತಃ ನಮ್ಮ ವಿರುದ್ಧ ಪ್ರತಿ ದೂರು ಸಲ್ಲಿಸಲು ಸಮಾಜಘಾತುಕ ಶಕ್ತಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ರಾಜೇಶ ಬೊಳ್ಳುಕಲ್ಲು, ತಿರುಲೇಶ್ ಬೆಳ್ಳೂರು, ಸಮಿತ್ ರಾಜ್ ಧರೆಗುಡ್ಡೆ, ಪ್ರಶಾಂತ ಕೆಂಪುಗುಡ್ಡೆ ಮತ್ತಿತರರು ಇದ್ದರು.
ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ನೋಟೀಸು ವಿಟ್ಲ ಪೊಲೀಸ್ ಠಾಣೆ ಕಾರ್ಯ ವೈಖರಿ ವಿರುದ್ಧ ಆಕ್ರೋಶ
RELATED ARTICLES