Thursday, April 24, 2025
Homeಉಡುಪಿಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ; ಸನ್ಮಾನ

ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ; ಸನ್ಮಾನ

ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ನೂತನವಾಗಿ ಮಾ 1 ರಂದು ಉದ್ಘಾಟನೆಗೊಂಡಿತ್ತು, ಸಂಸ್ಥೆಯ ಖಜಾಂಚಿ ಅಧಿಕಾರ ಸ್ವೀಕರಿಸದ ಪರ್ವ ಕಾಲದಲ್ಲಿ   ಈ ಸಂಸ್ಥೆಯ  ಹುಟ್ಟು ಹಾಕುವಲ್ಲಿ ಪ್ರಮುಖರಾದ  ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವೃತ್ತಿಯಲ್ಲಿ ಪ್ರಸಿದ್ಧ ಸಿವಿಲ್  ಇಂಜಿನಿಯರ್ ರಾಗಿದ್ದು ಗುತ್ತಿಗೆದಾರಾಗಿ  ನೂರಾರು ಮನೆ  ಕಟ್ಟಡ  ನಿರ್ಮಿಸಿದ್ದಾರೆ , ಪ್ರವೃತ್ತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ , ಸುಗಮ ಸಂಗೀತ  ಕ್ಷೇತ್ರದಲ್ಲಿ  ಜ್ಯೂಯ್ನಿಯರ್ ವಿದ್ಯಾಭೂಷಣ ರೆಂದು ಪ್ರಸಿದ್ಧ ಪಡೆದು ತನ್ನದ್ದೇ ಸಂಸ್ಥೆಯ ಮುಖಂತರ  500 ಕ್ಕೂ ಹೆಚ್ಚಿನ ಕಡೆ ಕಾರ್ಯಕ್ರಮ ನೀಡಿ ಸಾಧನೆ ಮಾಡಿದ್ದೀರಿ, ಹಲವು ಕಲೆಗಳಲ್ಲಿ ಪರಿಣಿತಿ ಯಲ್ಲಿ  ಯಕ್ಷಗಾನ ದ  ಚಂಡೆವಾದನ  , ಛಾಯಾ ಚಿತ್ರಗಾರರಾಗಿ ,ವಿವಿಧ ಸಂಘ  ಸಂಸ್ಥೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದೀರಿ  ನಿಮ್ಮ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ , ಹೂವು, ಹಾರ , ಸ್ಮರಣಿಕೆ ನೀಡಿ , ಅಭಿನಂದನೆ ಪತ್ರ ನೀಡಿ  ಗೌರವಿಸಲಾಯಿತು. 

ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ  ನಗರಸಭೆಯ  ಅಧ್ಯಕ್ಷರಾದ  ಪ್ರಭಾಕರ ಪೂಜಾರಿ , ಎಮ್ ಐ ಟಿ ಯಾ  ಇಂಜಿನಿಯರ್ , ಪ್ರೊ  ಕಿರಣ್ ಕಾಮತ್ , ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ದಿನಕರ ಹೇರೂರು ,  ಇಂಜಿನಿಯರ್ ನೀಲಕಂಠ ಎಮ್ ಹೆಗ್ಡೆ , ಇಂಜಿನಿಯರ್  ಕೆ ಎಮ್  ಮೋಹನರಾಜ್ , ಸಂಸ್ಥೆಯ ಅಧ್ಯಕ್ಷರಾದ ಕೆ  ರಂಜನ್ , ಕಾರ್ಯದರ್ಶಿ ಕೆ  ಹರೀಶ್ , ಗಣೇಶ್ ಬೈಲೂರು ,ಭರತ್ ಭೂಷಣ , ಅನಂತೇಶ್ ಆರ್  ಆಚಾರ್ಯ , ಮಹಾಬಲೇಶ್ವರ ಭಟ್ , ಸಂಘದ ವಿವಿಧ  ಪಧಾದಿಕಾರಿಗಳು ಉಪಸ್ಥರಿದ್ದರು.

RELATED ARTICLES
- Advertisment -
Google search engine

Most Popular