ಉಡುಪಿ: ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ಜ.6ರಿಂದ 12ರ ತನಕ ನಡೆಯಲಿರುವ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಶ್ರೀಮಠದಲ್ಲಿ ನಡೆಯಿತು.
ಸಮಾಲೋಚನೆ ಸಭೆಯಲ್ಲಿ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಆಶೀರ್ವಚನ ನೀಡಿ, ಸಾಮೂಹಿಕವಾಗಿ ಏಕಾಗ್ರತೆಯಿಂದ ನಡೆಸುವ ಅರ್ಚನೆ ಮತ್ತು ಪ್ರಾರ್ಥನೆಗೆ ವಿಶೇಷ ಶಕ್ತಿ ಇದ್ದು, ಎಲ್ಲರೂ ನೇರವಾಗಿ ಅರ್ಚನೆಯಲ್ಲಿ ಭಾಗವಹಿಸುವ ಅವಕಾಶವಿದೆ ಎಂದರು.
ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರ ಹೋಬಳಿ ವಹಿಸಿದ್ದರು. ಹಿಂದೂ ಸಂಘಟನೆಯ ಮುಖಂಡರಾದ ಪ್ರಸಾದ್ ಶೆಟ್ಟಿ ಕುತ್ಯಾರು, ಸತೀಶ್ ಕುತ್ಯಾರು ಕಾರ್ಯಕ್ರಮದ ಯಶಸ್ವಿಗೆ ಕೈಗೊಳ್ಳಬೇಕಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ನಾನಾ ಗ್ರಾಮಗಳಿಗೆ ಸಂಚಾಲಕರ ನೇಮಕ ಮಾಡಲಾಯಿತು. ಮಹಾಸಂಸ್ಥಾನದ ವ್ಯಾಪ್ತಿಯ ದೇವಸ್ಥಾನಗಳ ಮಾತೃ ಸಂಘಗಳ ಪದಾಧಿಕಾರಿಗಳನ್ನು ಸಂಚಾಲಕರನ್ನಾಗಿ ನೇಮಿಸಲಾಯಿತು. ಮಹಾಸಂಸ್ಥಾನದ ಶ್ರೀ ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬಿ.ಸೂರ್ಯ ಕುಮಾರ್ ಹಳೆಯಂಗಡಿ, ಶಿಲ್ಪಾ ಜಿ. ಸುವರ್ಣ, ಜನಾರ್ದನ ಆಚಾರ್ಯ ಕಳತ್ತೂರು, ದಿವ್ಯಾ ಶೆಟ್ಟಿಗಾರ್, ಶರ್ಮಿಳಾ, ಮೋಹಿನಿ ಸಿ.ಹೆಗ್ಡೆ ಇಂದಿರಾ ಆಚಾರ್ಯ, ಶಿವರಾಮ ಭಂಡಾರಿ, ಪ್ರಸಾದ್ ಶೆಟ್ಟಿ ವಳದೂರು, ನವೀನ್ ಶೆಟ್ಟಿ ಕುತ್ಯಾರು, ಶೈಲೇಶ್ ಕುತ್ಯಾರು, ನ್ಯಾಯವಾದಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು, ಕೆ. ನಾಗರಾಜ ಆಚಾರ್ಯ ಕಾಡಬೆಟ್ಟು, ತ್ರಾಸಿ ಸುಧಾಕರ ಆಚಾರ್ಯ, ಬಿ.ಯಜ್ಞೇಶ ಆಚಾರ್ಯ ಮಂಗಳೂರು, ಗುರುರಾಜ ಕೆ.ಜೆ. ಆಚಾರ್ಯ ಮಂಗಳೂರು, ಗಣೇಶ ಆಚಾರ್ಯ ಕೆಮ್ಮಣ್ಣು, ಜಿ.ಟಿ. ಆಚಾರ್ಯ ಮುಂಬಯಿ, ಕೇಶವ ಶರ್ಮಾ ಇರುವೈಲು, ಮನೋಜ್ ಶರ್ಮಾ ಕಟಪಾಡಿ, ಲೋಲಾಕ್ಷ ಶರ್ಮಾ ಕಟಪಾಡಿ ಉಪಸ್ಥಿತರಿದ್ದರು.
ಮಾತೃ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಕಾರ್ಕಳ ಸ್ವಾಗತಿಸಿ, ಉಪಾಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು ವಂದಿಸಿದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರ್ ನಿರೂಪಿಸಿದರು.