ಪುತ್ತೂರು: ಟ್ರಾನ್ಸಾಕ್ಷನಲ್ ಅನಾಲಿಸಿಸ್ ವರ್ತನಾ ವಿಜ್ಞಾನದ (ಟಿ.ಎ. ಸೈಕಾಲಜಿ) 51ನೆಯ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಮಹಾರಾಷ್ಟ್ರದ ಪುಣೆಯಲ್ಲಿ ಜರಗಲಿದ್ದು ಇಲ್ಲಿನ ಮಾನಸಿಕ ಸಂಘರ್ಷ ನಿವಾರಣಾ ತಜ್ಞ ಮತ್ತು ಅಂತಾರಾಷ್ಟ್ರೀಯ ತರಬೇತುದಾರ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಭಾಗವಹಿಸಲಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ಐ.ಸಿ.ಟಿ.ಎ. ಸಂಸ್ಥೆಯ ಪುಣೆ ಘಟಕವು ಈ ಸಮ್ಮೇಳನದ ಆತಿಥ್ಯ ವಹಿಸಲಿದ್ದು ಈ ತಿಂಗಳ ಅಂತ್ಯದಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಸಮ್ಮೇಳನ ಜರಗಲಿದೆ. ಅಂತಾರಾಷ್ಟ್ರೀಯ ಸಮ್ಮೇಳನಗಳ ತರಬೇತುದಾರರಾಗಿ ಗುರುತಿಸಿಕೊಂಡಿರುವ ಡಾ. ಮಸ್ಕರೇನಸ್ ಅವರು ಐ.ಸಿ.ಟಿ.ಎ. ಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ ಆಗಿದ್ದಾರೆ.