ಬೇರೆ ಒಕ್ಕೂಟಗಳಿಂದ ಕಡಿಮೆ ದರದಲ್ಲಿ ಹಾಲು ತಂದು ಮಾರಿ ಗಳಿಸುವ ಲಾ‘ಕ್ಕಿಂತ ಸ್ಥಳೀಯವಾಗಿ ಹಾಲು ಉತ್ಪಾದನೆ ಹೆಚ್ಚಳ, ಹೈನುಗಾರರ ಅಭಿವೃದ್ಧಿಗೆ ಉತ್ತೇಜನದ ಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ(ಬೆಂಗಳೂರು), ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ವತಿಯಿಂದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅ‘್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಲಿಕೋ ಬ್ಯಾಂಕಿನ ಡೈಮಂಡ್ ಜ್ಯುಬಿಲಿ ಸ‘ಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರ, ಹೈನುಗಾರಿಕೆ ಸಂಕಷ್ಟಘಿ, ಶ್ರಮದ ಹಿನ್ನೆಲೆಯಲ್ಲಿ ಕಡಿಮೆಯಾದ ಹಾಲು ಉತ್ಪಾದನೆ ಜತೆಗೆ ದರವೂ ಹೆಚ್ಚಬೇಕು. ಖರ್ಚು ಕಡಿತಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತಷ್ಟು ಬೆಳವಣಿಗೆ ಹೊಂದಿ ಲಾ‘ದಾಯಕವಾಗಲು ಪಡಿತರ ವಿತರಣೆ, ಬ್ಯಾಂಕಿಂಗ್, ಕೃಷಿ ಪರಿಕರ ಮಾರಾಟ ಸಹಿತ ಅವಕಾಶಗಳ ಸದ್ಭಳಕೆ ಮಾಡಬೇಕು ಎಂದು ಹೇಳಿದರು.
ಕೆಎಂಎ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಹಾಲು ಉತ್ಪಾದನೆ ಕಡಿಮೆಯಾದರೆ ಸಹಕಾರ ಸಂಘಗಳ ಸಿಬ್ಬಂದಿ ಸಮಸ್ಯೆ ಎದುರಿಸಲಿದ್ದಾರೆ. ಸಂಘಗಳಿಗೆ ಒಕ್ಕೂಟದಿಂದ ನೀಡುವ ಮಾರ್ಜಿನ್ ಮನಿ ಒಂದರಿಂದ ಎರಡು ರೂ. ಗಳಿಗೇರಬೇಕು ಎಂದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅ‘್ಯಕ್ಷ ರವಿರಾಜ್ ಹೆಗ್ಡೆ , ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಮಾತನಾಡಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಪಾ‘್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್ ಅ‘್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಉಪನಿಬಂ‘ಕ ಕೆ. ಆರ್. ಲಾವಣ್ಯಘಿ, ಸಹಕಾರ ಸಂಘಗಳ ಲೆಕ್ಕಪರಿಶೋ‘ನಾ ಇಲಾಖೆ ಉಪನಿರ್ದೇಶಕ ರೇಣುಕಾ ಜಿ., ಸಹಕಾರ ಸಂಘಗಳ ಕುಂದಾಪುರ ಉಪವಿ‘ಾಗದ ಸಹಾಯಕ ನಿಬಂ‘ಕ ಸುಕನ್ಯಾ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂ‘ಕ ಅರುಣ್ ಕುಮಾರ್ ಎಸ್. ವಿ., ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಎಚ್. ಗಂಗಾ‘ರ ಶೆಟ್ಟಿಘಿ, ಹರೀಶ್ ಕಿಣಿ ಅಲೆವೂರು, ಕೆ. ಸುರೇಶ್ ರಾವ್, ಮನೋಜ್ ಎಸ್. ಕರ್ಕೇರ ಉಪಸ್ಥಿತರಿದ್ದರು.
ಅಕ್ಷತಾ ಶೆಟ್ಟಿ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.
ಸ್ಥಳೀಯವಾಗಿ ಹಾಲು ಉತ್ಪಾದನೆ ಹೆಚ್ಚಳಕ್ಕೆ ಗಮನ ಕೊಡಿ: ಡಾ. ಶೆಟ್ಟಿ
RELATED ARTICLES