ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಸ್ವಾತಿ ಹೋಟೆಲ್ನಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಬ್ಯಾಂಗಲೋರ್ ಎಲೈಟ್ ನ ಅಧ್ಯಕರಾಗಿ ಕೈಗಾರಿಕೋದ್ಯಮಿ ಸಮಾಜ ಸೇವಕ ಫಣಿರಾಜ್ ಜೈನ್ ರವರು ಲಯನ್ಸ್ ಕ್ಲಬ್ ನ ಹಿರಿಯ ಅಧಿಕಾರಿಗಳ ಮತ್ತು ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದರು.
ಸುಮಾರು 64 ವರ್ಷ ಪ್ರಾಯದ ಪಣಿರಾಜ್ ಅವರು ಕರಾವಳಿ ತೀರದ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದಲ್ಲಿ ಆದಿರಾಜ ಭಂಗ ಮತ್ತು ಸುನಂದಾದೇವಿಯ ಮಗನಾಗಿ ಮಾರ್ಚ್ 16 1960ರಲ್ಲಿ ಜನಿಸಿದ್ದು, ಬಾಲ್ಯದ ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ತಂದೆ ತಾಯಿ ಮತ್ತು ಕುಟುಂಬದವರ ಸಮಾಜಮುಖಿ ಸಮಾಜ ಪರ ಕೆಲಸಗಳನ್ನು ಮೈಗೂಡಿಸಿಕೊಂಡು ಬಂದಿದ್ದು, ಕಾಲೇಜ್ ಜೀವನದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಪದವಿ ವ್ಯಾಸಂಗದ ನಂತರ ದಿನಗಳಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿ ಅನೇಕ ಸಮಾಜದ ಬಂಧುಗಳ ಜೊತೆ ನಿಕಟ ಪೂರ್ವ ಸಂಬಂಧಗಳನ್ನು ಬೆಳೆಸುತ್ತಾ “ಸಮಂತ ಎಂಟರ್ಪ್ರೈಸಸ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಮೂರು ದಶಕಗಳಿಂದ ಹಲವಾರು ಬಡ ಕಾರ್ಮಿಕ ವರ್ಗದವರಿಗೆ ಮತ್ತು ದೀನದಲಿತರಿಗೆ ತಮ್ಮ ಕೈಗಾರಿಕೆ ಸಂಸ್ಥೆಯಲ್ಲಿ ಕೆಲಸವನ್ನು ನೀಡುತ್ತಾ ಹಲವಾರು ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ.
ಅವರ ಈ ಸಮಾಜಮುಖಿ ಕೆಲಸಗಳಿಗೆ ಭಾರತೀಯ ಅಂಚೆ ಇಲಾಖೆ ಉದ್ಯೋಗಿಯಾಗಿರುವ ಕಿರಣ್ಮಯಿ ದೇವಿ ಹಾಗೂ ಪುತ್ರ ಇಂಜಿನಿಯರ್ ಸ್ಪಂದನ ಜೈನ್ ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ಬಡವರು ಅಂಗವಿಕಲರು ಮತ್ತು ನಿಸ್ಸಹಾಯಕರಿಗೆ ಸಹಾಯ ಮಾಡುವ ಮನೋಭಾವದಿಂದ ಫಣಿರಾಜ್ ರವರಿಗೆ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವ ಸಮರ್ಪಣೆಯಾಗಿರುತ್ತದೆ. ಸುಮಾರು 35 ವರ್ಷಗಳ ಸತತ ಸೇವಾ ಮನೋಭಾವನೆಯ ಪ್ರತಿಫಲವಾಗಿ ಹಲವಾರು ವರ್ಷಗಳಿಂದ ಲಯನ್ಸ್ ಕ್ಲಬ್ ನಲ್ಲಿ ಸಕ್ರಿಯ ಗುರುತಿಸಿಕೊಂಡಿರುವ ಸದಸ್ಯರಾಗಿ ಫಣಿರಾಜ್ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದು ಇಡೀ ಸಮಾಜಕ್ಕೆ ಸಂತೋಷದ ವಿಷಯ ಹಾಗೂ ಮುಂದಿನ ಅವರ ಅಧ್ಯಕ್ಷ ಅವಧಿಯಲ್ಲಿ ಎಲ್ಲಾ ರೀತಿಯ ಸಮಾಜಮುಖಿ ಕೆಲಸ ಕಾರ್ಯಗಳು ನಡೆಯಲಿವೆ ಎಂದು ಪುಣಿರಾಜ್ರವರು ಆಶಯ ವ್ಯಕ್ತಪಡಿಸಿದರು.