Friday, May 16, 2025
Homeಉಡುಪಿಸಹಕಾರಿ ಸಂಘದ ಕಚೇರಿಗೆ ಮಧ್ಯರಾತ್ರಿ ನುಗ್ಗಿದ ಕಳ್ಳನನ್ನು ಹತ್ತೇ ನಿಮಿಷದಲ್ಲಿ `ಲೈವ್’ ಬಂಧಿಸಿದ ಪೊಲೀಸರು!: ವ್ಯಾಪಕ...

ಸಹಕಾರಿ ಸಂಘದ ಕಚೇರಿಗೆ ಮಧ್ಯರಾತ್ರಿ ನುಗ್ಗಿದ ಕಳ್ಳನನ್ನು ಹತ್ತೇ ನಿಮಿಷದಲ್ಲಿ `ಲೈವ್’ ಬಂಧಿಸಿದ ಪೊಲೀಸರು!: ವ್ಯಾಪಕ ಮೆಚ್ಚುಗೆ

ಗಂಗೊಳ್ಳಿ: ಇಲ್ಲಿನ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಹೊಸಾಡು ಶಾಖೆಯ ಕಚೇರಿಯ ಕಿಟಕಿಯ ಸರಳುಗಳನ್ನು ಮುರಿದು ನುಗ್ಗಿದ ಕಳ್ಳನನ್ನು ಹತ್ತೇ ನಿಮಿಷದಲ್ಲಿ ಬಂಧಿಸಿದ ಘಟನೆ ನಡೆದಿದೆ. ಮುಳ್ಳಿಕಟ್ಟೆಯಲ್ಲಿರುವ ಸಹಕಾರಿ ಸಂಘದ ಹೊಸಾಡು ಶಾಖೆಯ ಕಚೇರಿಯಲ್ಲಿ ರಾತ್ರಿ 1:47ಕ್ಕೆ ಕಳ್ಳ ನುಗ್ಗಿದ್ದಾನೆ. ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್ ನಲ್ಲಿ ಘಟನೆಯನ್ನು ಪತ್ತೆ ಹಚ್ಚಲಾಗಿ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

10 ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಕಳ್ಳನನ್ನು ಹಿಡಿದರು. ಕಳ್ಳ ಕೇರಳದಿಂದ ಬಂದವನು ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಲೈವ್ ಮಾನಿಟರಿಂಗ್ ಸಿಬ್ಬಂದಿ, ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕಳ್ಳನನ್ನು ತಕ್ಷಣವೇ ಹಿಡಿಯಲು ಸಾಧ್ಯವಾಗಿದೆ. ಈ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular