ಬೆಂಗಳೂರು : ಅಂತರ್ ರಾಷ್ಟ್ರೀಯ ಫೀಲಂ ಫೆಸ್ಟಿವಲ್ ಮಾ 1 ರಿಂದ 8 ರವರೆಗೆ ಬೆಂಗಳೂರಿನ ಒರಿಯನ್ ಮಾಲ್ ನಲ್ಲಿರುವ ಪಿವಿಆರ್ ಥೀಯೇಟರ್ ನಲ್ಲಿ ನಡೆಯಲಿದೆ.
ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬಂದಿದ್ದು ಈಗಾಗಲೇ ಜನಮನ್ನಣೆಗಳಿಸಿದ ದಸ್ಕತ್ ತುಳು ಚಿತ್ರವು ಬೆಂಗಳೂರುನಲ್ಲಿ ನಡೆಯಲಿರುವ 16ನೇ ಅಂತರ್ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
ಇದು ತುಳುನಾಡು ಹೆಮ್ಮೆ ಪಡುವ ವಿಷಯ. ರಾಘವೇಂದ್ರ ಕುಡ್ವ ನಿರ್ಮಾಪಕರಾಗಿದ್ದಾರೆ.
ಹಲವಾರು ತುಳುನಾಡಿನ ಕಲಾವಿದರ ತಂಡ ಈ ಚಿತ್ರದಲ್ಲಿರೋದು ತುಳುನಾಡಿಗೆ ಹೆಮ್ಮೆಯ ವಿಚಾರ.