Saturday, April 26, 2025
Homeಉಡುಪಿಶ್ರೀ ಸಾಯಿ ಈಶ್ವರ್ ಗುರೂಜಿಯವರ ಉದ್ಯಾವರ ಶ್ರೀ ಶಂಭುಕಲ್ಲು ಶೈಲೇಶ್ವರ ಶಿವ ದೇವಸ್ಥಾನದಲ್ಲಿ ಪ್ರದಕ್ಷಿಣೆ

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಉದ್ಯಾವರ ಶ್ರೀ ಶಂಭುಕಲ್ಲು ಶೈಲೇಶ್ವರ ಶಿವ ದೇವಸ್ಥಾನದಲ್ಲಿ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹನ್ನೊಂದನೇ ದಿನದ ಪ್ರದಕ್ಷಿಣೆಗೆ ದಿನಾಂಕ: 24-06-2024 ಸೋಮವಾರ ಉದ್ಯಾವರ ಶ್ರೀ ಶಂಭುಕಲ್ಲು ಶೈಲೇಶ್ವರ ಶಿವ ದೇವಸ್ಥಾನದ ಅರ್ಚಕರಾದ ಶ್ರೀ ಗಣಪತಿ ಆಚಾರ್ಯ , ಆಡಳಿತ ಮುಕ್ತೇಸರರು ಶ್ರೀ ರಾಘವೇಂದ್ರ ಮಯ್ಯರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ಶ್ರೀಮತಿ ಗೀತಾಂಜಲಿ ಎಂ.ಸುವರ್ಣ , ಶ್ರೀಮತಿ ವೀಣಾ .ಎಸ್.ಶೆಟ್ಟಿ, ಶ್ರೀ ವಿಜಯ ಕುಂದರ್,ಶ್ರೀ ಸತೀಶ್ ದೇವಾಡಿಗ, ಶ್ರೀ ಶಶಾಂಕ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular