ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಕೋಟಿ-ಚೆನ್ನಯರು ಪಡುಮಲೆಯಿಂದ ಹೊರಟು ಬರುವಾಗ ಆಟ ಆಡಿ ವಿಶ್ರಮಿಸಿದ ಪುಣ್ಯ ಕ್ಷೇತ್ರವಾದ ಪಾಪೆಮಜಲು ಬೇಂಗತ್ತಡ್ಕದ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಾರ್ಚ್ 21, 22 ರಂದು ವೇಣೂರು ಪ್ರದೀಪ್ ಶಾಂತಿಯವರ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮವು ನಡೆಯಲಿದೆ.
ಮಾರ್ಚ್ 21 ಮತ್ತು 22ರಂದು ಧಾರ್ಮಿಕ, ಸಭಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಹರಿಹರಸುತ ಸಿಂಗಾರಿ ಮೇಳ ದೇಲಂಪಾಡಿ ಇವರಿಂದ ಚೆಂಡೆ ವಾದನ ನಡೆಯಲಿದೆ.