Friday, May 16, 2025
Homeಉಜಿರೆಪ್ರೊ. ಎನ್. ಜಿ. ಪಟವರ್ಧನ್ ರಿಗೆ ನುಡಿನಮನ

ಪ್ರೊ. ಎನ್. ಜಿ. ಪಟವರ್ಧನ್ ರಿಗೆ ನುಡಿನಮನ

ಉಜಿರೆ : ಪ್ರೊ. ಪ್ರಭಾಕರ ಜೋಶಿ ನುಡಿನಮನ ಸಲ್ಲಿಸಿದರು. ವಿಚಾರವಿನಿಮಯದೊಂದಿಗೆ ಸದಾ ಸಂತೋಷವನ್ನು ಸಾಹಿತ್ಯದ ಮೂಲಕ ಹಂಚುವ ಕೆಲಸ ಮಾಡುತ್ತಿದ್ದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ. ಎನ್. ಜಿ. ಪಟವರ್ಧನ್ ಕಲ್ಪನಾಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ, ಅಭಿರುಚಿ ಮತ್ತು ಪರಿಣತಿ ಹೊಂದಿದ್ದು ಸದಾ ಲವಲವಿಕೆ, ಪ್ರಸನ್ನತೆ ಮತ್ತು ತೃಪ್ತಿಕರ ಜೀವನ ಅವರ ಯಶಸ್ಸಿನ ಗುಟ್ಟಾಗಿತ್ತು ಎಂದು ಹವ್ಯಾಸಿ  ಯಕ್ಷಗಾನ ಕಲಾವಿದ  ಹಾಗೂ ಹಿರಿಯ ವಿದ್ವಾಂಸ ಪ್ರೊ. ಎಂ. ಪ್ರಭಾಕರ ಜೋಶಿ ಹೇಳಿದರು. ಅವರು ಶನಿವಾರ ಉಜಿರೆಯಲ್ಲಿ ರಾಮಕೃಷ್ಣ ಸಭಾಭವನದಲ್ಲಿ ಆಯೋಜಿಸಿದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಪ್ರೊ. ಎನ್. ಜಿ. ಪಟವರ್ಧನ್ ಅವರಿಗೆ ನುಡಿನಮನ ಸಲ್ಲಿಸಿದರು.


ಸದಾ ಲವಲವಿಕೆಯಿಂದ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುತ್ತಿದ್ದ ಅವರು ಸಲುಗೆ, ಸ್ನೇಹವನ್ನು ಎಂದೂ ದುರುಪಯೋಗ ಪಡಿಸಿದವರಲ್ಲ. ಕಥೆ, ಕಾದಂಬರಿ, ಕವನ, ಚುಟುಕಗಳು, ಪ್ರಬಂಧ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿಣತರಾಗಿದ್ದ ಅವರು ಇಳಿ ವಯಸ್ಸಿನಲ್ಲಿಯೂ ಪ್ರೇಮ ಕವನಗಳನ್ನು ಬರೆಯುತ್ತಿದ್ದರು. ಕಂಪ್ಯೂಟರ್ ಬಳಸುತ್ತಿದ್ದರು. ಅವರ ಎಲ್ಲಾ ಕೃತಿಗಳೂ ಸರಳ ಶೈಲಿಯಲ್ಲಿದ್ದು ಸುಲಭಗ್ರಾಹ್ಯವಾಗಿವೆ. ಛಂದಸ್ಸು, ವ್ಯಾಕರಣದಂತಹ ಶುಷ್ಕ ವಿಷಯಗಳನ್ನೂ ಅವರು ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ. ಸಾಹಿತ್ಯ ವಲಯದಲ್ಲಿ ಅವರ ಸ್ಮರಣಾರ್ಥ ಸದಾ ನೆನಪುಳಿಯುವಂತೆ ಯಾವುದಾದರೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದ ಪ್ರೊ. ಜೋಶಿ ಈ ಬಗ್ಯೆ ತಾನು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರೊ. ಪಟವರ್ಧನ್ ಅವರ ತಂಗಿ ಅರುಣ ತಾನು ರಚಿಸಿದ ಕವನ ವಾಚಿಸಿದರು.

ಡಾ. ಸುರೇಶ ಚಿಪ್ಳೂಣ್ಕರ್, ಪ್ರೊ. ಪ್ರಕಾಶ ಪ್ರಭು, ನಿವೃತ್ತ ಪ್ರಾಂಶುಪಾಲ ಪ್ರೊ. ಟಿ. ಕೃಷ್ಣಮೂರ್ತಿ, ಪುತ್ತೂರಿನ ಗೋಪಾಲಕೃಷ್ಣ ಆಚಾರ್, ರಘುಪತಿ ತಾಮಣ್ಕರ್ ಮಾತನಾಡಿ ಪ್ರೊ. ಪಟವರ್ಧನ್ ಅವರ ಶಿಸ್ತುಬದ್ಧ ಜೀವನ, ಸಾಧನೆ, ವೃತ್ತಿ-ಪ್ರವೃತ್ತಿಗಳ ಬಗ್ಯೆ ಮಾತನಾಡಿ ನುಡಿನಮನ ಸಲ್ಲಿಸಿದರು. ಪತ್ನಿ ವಿಜಯಲಕ್ಷ್ಮಿ ಪಟವರ್ಧನ್, ಡಾ. ಕಿಶೋರ್ ಪಟವರ್ಧನ್, ವಿಕ್ರಮ್ ಪಟವರ್ಧನ್ ಮತ್ತು ಸೊಸೆಯಂದಿರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular