ಉಡುಪಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ , ಮೂಡನಿಡಂಬೂರು ಬನ್ನಂಜೆ ಉಡುಪಿ ಇದರ ರಜತ ಮಹೋತ್ಸವ ಸಮಾರಂಭ 4 ದಿನಗಳ ಕಾಲ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸೆಪ್ಟೆಂಬರ್ 07 2024 ರಿಂದ 10 2024 ವರೆಗೆ ನೆಡೆಯಲಿದೆ, ಇದರ 25 ನೇ ವರ್ಷದ ಆಹ್ವಾನ ಪತ್ರಿಕೆಯನ್ನು ಶಿರೂರು ಮಠಾಧೀಶರಾದ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು , ಉಡುಪಿ ಶಿರೂರು ಮಠದಲ್ಲಿ ಬುಧವಾರ ಸಂಜೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಎಂ. ಪ್ರಭಾಕರ್ ಶೆಟ್ಟಿ , ಅಧ್ಯಕ್ಷರಾದ ಯೋಗೀಶ್ ಭಂಡಾರಿ ಬನ್ನಂಜೆ , ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ , ಯೋಗೀಶ್ ಸುವರ್ಣ ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ ಕೋಶಾಧಿಕಾರಿ ಯು. ಸುಬ್ರಹ್ಮಣ್ಯ ರಾವ್ , ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ , ಸಮಿತಿಯ ಸದಸ್ಯರಾದ ರಾಜಾ ಬನ್ನಂಜೆ , ಸತೀಶ್ ಭಂಡಾರಿ , ಮುಕೇಶ್ ಬನ್ನಂಜೆ ಉಪಸ್ಥಿತರಿದ್ದರು.