ಮುಧೋಳ: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರವಾಹ ಪರಿಸ್ಥಿತಿ ವೀಕ್ಷಿಸಲೆಂದು ತೆರಳಿದ್ದರು. ಈ ವೇಳೆ ಅವರ ಕಣ್ಣ ಮುಂದೆಯೇ ಹರಿಯುವ ನದಿಗಿಳಿದು ಪಂಪ್ ಸೆಟ್ ತರಲು ರೈತರು ತೆರಳಿದ್ದು ಕಂಡುಬಂದು, ನದಿಗಿಳಿಯದಂತೆ ಸಚಿವರು ವಿನಂತಿಸಿದ ಘಟನೆ ನಡೆದಿದೆ.
ಮಿರ್ಜಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಅವಲೋಕಿಸಲೆಂದು ಸಚಿವರು ಆಗಮಿಸಿದ್ದರು. ಆದರೆ ಇದೇ ವೇಳೆ ಪಂಪ್ ಸೆಟ್ ತರಲೆಂದು ನದಿಗಿಳಿದಿದ್ದಾರೆ. ಈ ವೇಳೆ ಸಚಿವರು ದಯವಿಟ್ಟು ನದಿಗಿಳಿಯಬೇಡಿ ಎಂದು ವಿನಂತಿಸಿದರು. ಜನರು ನದಿಗಿಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.