Saturday, May 24, 2025
Homeರಾಜ್ಯಸಚಿವರ ಎದುರೇ ಪಂಪ್‌ ಸೆಟ್‌ ತರಲೆಂದು ನದಿಗಿಳಿದ ರೈತರು | ಪ್ರವಾಹದ ನೀರಿಗಿಳಿಯದಂತೆ ಸಚಿವರಿಂದ ಮನವಿ

ಸಚಿವರ ಎದುರೇ ಪಂಪ್‌ ಸೆಟ್‌ ತರಲೆಂದು ನದಿಗಿಳಿದ ರೈತರು | ಪ್ರವಾಹದ ನೀರಿಗಿಳಿಯದಂತೆ ಸಚಿವರಿಂದ ಮನವಿ

ಮುಧೋಳ: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಪ್ರವಾಹ ಪರಿಸ್ಥಿತಿ ವೀಕ್ಷಿಸಲೆಂದು ತೆರಳಿದ್ದರು. ಈ ವೇಳೆ ಅವರ ಕಣ್ಣ ಮುಂದೆಯೇ ಹರಿಯುವ ನದಿಗಿಳಿದು ಪಂಪ್‌ ಸೆಟ್‌ ತರಲು ರೈತರು ತೆರಳಿದ್ದು ಕಂಡುಬಂದು, ನದಿಗಿಳಿಯದಂತೆ ಸಚಿವರು ವಿನಂತಿಸಿದ ಘಟನೆ ನಡೆದಿದೆ.
ಮಿರ್ಜಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಅವಲೋಕಿಸಲೆಂದು ಸಚಿವರು ಆಗಮಿಸಿದ್ದರು. ಆದರೆ ಇದೇ ವೇಳೆ ಪಂಪ್‌ ಸೆಟ್‌ ತರಲೆಂದು ನದಿಗಿಳಿದಿದ್ದಾರೆ. ಈ ವೇಳೆ ಸಚಿವರು ದಯವಿಟ್ಟು ನದಿಗಿಳಿಯಬೇಡಿ ಎಂದು ವಿನಂತಿಸಿದರು. ಜನರು ನದಿಗಿಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES
- Advertisment -
Google search engine

Most Popular