ದಿನಾಂಕ 16-03-2025 ರಂದು ಶಿವಮೊಗ್ಗದಲ್ಲಿ ನಡೆದ ರಾಜ್ಯ ಬರಹಗಾರರ ಸಂಘ (ರಿ) ರಾಜ್ಯ ಘಟಕ ಹೂವಿನ ಹಡಗಲಿ ಇವರ ವತಿಯಿಂದ ನಡೆದ ರಾಷ್ಟ್ರಮಟ್ಟದ ನುಡಿ ವೈಭವ -2025 ರ ಕಾರ್ಯಕ್ರಮದಲ್ಲಿ ಪುಷ್ಪ ಪ್ರಸಾದ್ ರವರಿಗೆ, ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ನಿರಂತರವಾಗಿ ತೊಡಗಿದ್ದು ಕನ್ನಡ ನಾಡು ನುಡಿಗಾಗಿ ತಮ್ಮ ಅಮೂಲ್ಯ ಸೇವೆಯನ್ನು ನೀಡುತ್ತಾ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಉಳಿಯುವಂತಹ ಕಾರ್ಯಕಗೊಂಡು ಮಾಡಿದ ಸಾಹಿತ್ಯ ಸೇವೆ, ಇತ್ಯಾದಿ ಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ ಸಾಹಿತ್ಯ ಸೇವಾರತ್ನ ಪ್ರಶಸ್ತಿಯನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಪುರಸ್ಕರಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪುಷ್ಪ ಪ್ರಸಾದ್ ಇವರು ಈಗಾಗಲೇ ಮೂರು ಕವನ ಸಂಕಲನ, ಎರೆಡು ಕಥಾ ಸಂಕಲನ ಹಾಗೂ ಲೇಖನ ಸಂಕಲನವನ್ನು ಪ್ರಕಟಿಸಿ ಕನ್ನಡಮ್ಮನ ಮಡಿಲಿಗೆ ಸೇರಿಸಿರುತ್ತಾರೆ, ಅಲ್ಲದೇ ಇವರು ಹಲವಾರು ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ.
ಇವರು ಬರಹಗಾರರ ಸಂಘ (ರಿ) ರಾಜ್ಯ ಘಟಕ ಹೂವಿನ ಹಡಗಲಿ, ಜಿಲ್ಲಾ ಘಟಕ, ಉಡುಪಿ ಇದರ ಅಧ್ಯಕ್ಷೆಯಾಗಿಯೂ, ಸಿರಿಗನ್ನಡ ಮಹಿಳಾ ಘಟಕ ಉಡುಪಿ ಜಿಲ್ಲಾಧ್ಯಕ್ಷೆಯಾಗಿಯೂ, ಗುರುಕುಲ ಪ್ರತಿಷ್ಠಾನ ಉಡುಪಿ ಜಿಲ್ಲೆಯ ಗೌರವ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಆಮಂತ್ರಣ ಪರಿವಾರ ಉಡುಪಿ ಜಿಲ್ಲೆಯ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುತ್ತಾರೆ. ಇವರು ಪ್ರತಿಲಿಪಿ ಕನ್ನಡದ ಸಕ್ರೀಯ ಸಾಹಿತಿಯೂ ಹೌದು, ಯುವರ್ ಕ್ವೋಟ್ ಮತ್ತು ಸ್ಟೋರಿ ಮಿರರ್ ನ ಸಕ್ರೀಯ ಬರಹಗಾರ್ತಿಯೂ ಹೌದು. ಇವರು ಪ್ರಸ್ತುತ ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ವರದಿ: ಸುರೇಶ್ ಕುಮಾರ್ ಚಾರ್ವಕ